News Karnataka Kannada
Monday, April 29 2024
ಚಿಕಮಗಳೂರು

ನರಸಿಂಹರಾಜಪುರ: ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸುವ ನೈತಿಕತೆ ಬಿಜೆಪಿ ಅಧ್ಯಕ್ಷರಿಗೆ ಇಲ್ಲ

ನರಸಿಂಹರಾಜಪುರ
Photo Credit : News Kannada

ನರಸಿಂಹರಾಜಪುರ: ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಸಂಸತ್ತಿನಲ್ಲಿ ಲಿಖಿತ ಹೇಳಿಕೆ ನೀಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನೆಡ್ಡಾ ಅವರಿಗೆ ಇದೇ ೨೦ರಂದು ಕೊಪ್ಪದಲ್ಲಿ ನಡೆಯುವ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಲು ಯಾವುದೇ ನೈತಿಕತೆಯಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಓಂಪ್ರಕಾಶ್ ಅವರು ಸಂಸತ್ತ್ ನಲ್ಲಿ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಕೇಂದ್ರದ ರಾಜ್ಯ ಖಾತೆಯ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ೨೨ ಡಿಸೆಂಬರ್ ೨೦೧೭ರಂದು ಅಡಿಕೆ ತಿನ್ನುವುದರಿಂದ ಕ್ಯಾನರ್ ಬರುತ್ತದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಅಂದು ಕೇಂದ್ರ ಆರೋಗ್ಯ ಸಚಿವರಾಗಿದ್ದ ಜೆ.ಪಿ.ನೆಡ್ಡಾ ಅವರ ಗಮನಕ್ಕೆ ತರದೇ ಈ ರೀತಿ ಹೇಳಿಕೆ ನೀಡಲು ಸಾಧ್ಯವೇ. ಈ ರೀತಿ ಹೇಳಿಕೆ ನೀಡಿದವರಿಂದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸುತ್ತಿರುವುದು ಅಡಿಕೆ ಬೆಳೆಗಾರರಿಗೆ ಮಾಡುವ ಅಪಮಾನವಾಗಿದೆ ಎಂದು ಜರಿದರು.

ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದೂಬೆ ೧೦ಜುಲೈ ೨೦೨೧ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುವುದರಿಂದ ಇದನ್ನು ನಿಷೇಧಿಸ ಬೇಕು ಎಂದು ಪತ್ರ ಬರೆದಿದ್ದಾರೆ. ಈ ಪತ್ರದ ಆಧಾರದ ಮೇಲೆ ಈಗಿನ ಕೇಂದ್ರ ಆರೋಗ್ಯ ಸಚಿವರಾದ ಮನ್ ಷುಕ್ ಮಾನ್ ಡವೀಯ ಅವರು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಜುಲೈ ೨೭,೨೦೨೧ರಂದು ನಡೆದ ೨೪ನೇ ಸಭೆಯಲ್ಲಿ ಅಡಿಕೆ ನಿಷೇಧಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.

ಬಿಜೆಪಿಯ ಸಚಿವರೇ ಇಂತಹ ಹೇಳಿಕೆ ನೀಡಿದ್ದರೂ ಮಲೆನಾಡಿನ ಭಾಗದ ಲಕ್ಷಾಂತರ ರೈತರ ಬದುಕಿನ ಆಗು ಹೋಗುಗಳ ಬಗ್ಗೆ ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆ ಅವರು ಚಕಾರ ಎತ್ತದೆ ಅಡಿಕೆಯ ವಿಚಾರವನ್ನು ರಾಜಕೀಯ ವಸ್ತುವನ್ನಾಗಿ ಬಳಸುತ್ತಿದ್ದಾರೆ. ಬಿಜೆಪಿಯವರು ದ್ವಂದ ನಿಲುವನ್ನು ಹೊಂದಿ ಅಡಿಕೆ ಬೆಳೆಗಾರರಿಗೆ ಮಂಕುಬೂದಿ ಎರಚಿ ಗುಜರಾತಿನ ಗುಟ್ಕಾ ಮಾಲೀಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಯುಪಿಎ ಸರ್ಕಾರವಿದ್ದಾಗ ಅಡಿಕೆ ಆಮದು ಸುಂಕವನ್ನು ?೧೧೦ಕ್ಕೆ ಹೆಚ್ಚಿಸಿ ಅಡಿಕೆ ಕಳ್ಳಸಾಗಾಣಿಕೆಯನ್ನು ನಿಷೇಧಿಸಿದ್ದರಿಂದ ಅಡಿಕೆಗೆ ಕ್ವಿಂಟಾಲ್ ಗೆ ?೮೦ ಸಾವಿರಕ್ಕಿಂರಲೂ ಅಧಿಕ ದರ ನಿಗದಿಯಾಗಿತ್ತು. ಪ್ರಸ್ತುತ ಆಮದು ಸುಂಕವನ್ನು ?೩೫೧ಕ್ಕೆ ಹೆಚ್ಚಿಸಿದರೂ ಅಡಿಕೆ ಕಳ್ಳಸಾಗಾಣಿಕೆಯನ್ನು ನಿಷೇಧಿಸದಿರುವುದರಿಂದ ಅಡಿಕೆ ದರ ಕ್ವಿಂಟಾಲ್ ಗೆ ? ೪೫ ಸಾವಿರದ ಅಸುಪಾಸಿನಲ್ಲಿ ನಿಗದಿಯಾಗುತ್ತಿದೆ ಎಂದರು.

ಮಲೆನಾಡಿನ ಭಾಗದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ತಗುಲಿ ೩ವರ್ಷಗಳಾದರೂ ಇದಕ್ಕೆ ಜಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಇಂದಿರಾ ಜೈಸಿಂಗ್ ಹೇಳಿಕೆ ನೀಡಿದ್ದರೂ ಎನ್ನುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ದಾಖಲೆಗಳನ್ನು ನೀಡಿ ಮಾತನಾಡದೆ ಬಾಯಿಚಪಲಕ್ಕೆ ಮಾತನಾಡುತ್ತಿದ್ದಾರೆ . ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು ೯ವರ್ಷಗಳಾಗಿದೆ ಅಡಿಕೆ ಬೆಳೆಗಾರರಿಗೆ ಏನು? ಮಾಡಿದೆ ಎಂದು ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು