News Karnataka Kannada
Monday, April 29 2024
ಚಿಕಮಗಳೂರು

ನಾಲ್ಕು ಬೈಕ್‌ ಕದ್ದು ಜಖಂ ಮಾಡಿದ ದುಷ್ಕರ್ಮಿಗಳು

Karnataka Police
Photo Credit :

ಚಿಕ್ಕಮಗಳೂರು: ಮನೆ ಮುಂದೆ ನಿಲ್ಲಿಸಿದ್ದ ನಾಲ್ಕ ಬೈಕ್ ಗಳನ್ನ ಕದ್ದ ದುಷ್ಕರ್ಮಿಗಳು ಸಂಪೂರ್ಣ ಜಖಂ ಮಾಡಿ ಹೊಲದಲ್ಲಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ನಿಡಘಟ್ಟ ಗ್ರಾಮದಲ್ಲಿ ನಡೆದಿದೆ.
ನಾಲ್ಕು ಬೈಕ್‍ಗಳನ್ನ ಕದ್ದಿರೋ ದುಷ್ಕರ್ಮಿಗಳು ಕದ್ದು ತೆಗೆದುಕೊಂಡು ಹೋಗಲು ಆಗಿಲ್ಲ. ನಾಲ್ಕೂ ಬೈಕ್‍ಗಳನ್ನೂ ಜಜ್ಜಿ, ಮಾಸ್ಕ್, ಹೆಡ್‍ಲೈಟ್, ಇಂಡಿಕೇಟರ್ ಲೈಟ್, ಪೆಟ್ರೋಲ್ ಟ್ಯಾಂಕ್ ಸೇರಿದಂತೆ ಬೈಕನ್ನ ಸಂಪೂರ್ಣ ಜಖಂ ಮಾಡಿ ಜಜ್ಜಿ ಹೊಲದಲ್ಲಿ ಬಿಟ್ಟು ಹೋಗಿದ್ದಾರೆ. ಮೇಲ್ನೋಟಕ್ಕೆ ಇದು ಕಳ್ಳರ ಕೆಲಸವಲ್ಲ. ಸ್ಥಳೀಯರು ಅಥವಾ ಅಕ್ಕಪಕ್ಕದ ಊರಲ್ಲಿ ಯಾರೋ ಆಗದವರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಥಳೀಯರು ಸಖರಾಯಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು