ಕಾರವಾರ: ಕಾರವಾರದ ನಗರದ ಬಾಡದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಊಟ ಸರಿಯಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪ್ರತಿಭಟಣೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇರುವ ವಸತಿ ನಿಲಯವಾಗಿದ್ದು, ಮೀನನ್ನು ಸರಿಯಾಗಿ ಸ್ವಚ್ಛ ಮಾಡುವುದಿಲ್ಲ. ಸಾಂಬಾರ ಮಾಡಿದರೆ ಮಸಾಲೆಯನ್ನು ಸರಿಯಾಗಿ ಹಾಕುವುದಿಲ್ಲ. ಶೌಚಾಲಯವನ್ನು ಸ್ವಚ್ಛ ಮಾಡುವುದಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ್, ಅರ್ಧಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಳಿಕ ವಸತಿ ನಿಲಯ ಪರಿಶೀಲನೆ ನಡೆಸಿದರು. ಗುಣಮಟ್ಟದ ಆಹಾರ ನೀಡುವಂತೆ, ಸ್ವಚ್ಛತೆಯನ್ನ ಮಾಡುವಂತೆ ವಾರ್ಡನ್ಗೆ ಸೂಚಿಸಿದರು.
ಅಡುಗೆ ಸಹಾಯಕ ಹಾಗೂ ಸೆಕ್ಯುರಿಟಿ ಗಾರ್ಡ್ ಅವರ ಬೇಜವಾಬ್ದಾರಿ ಬಗ್ಗೆ ಮಕ್ಕಳು ದೂರಿದರು. ತಾವು ಧಿಡೀರ್ ಆಗಿ ಬಂದು ಪರಿಶೀಲನೆ ಮಾಡಿ ಅವರು ತಪ್ಪು ಮಾಡಿರುವುದು ಗಮನಕ್ಕೆ ಬಂದರೆ ಕೆಲಸದಿಂದ ವಜಾ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.