ಕಾರವಾರ: ಕಳೆದ ಕೆಲವು ದಿನಗಳ ಹಿಂದೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಚಾಲಕನ ಬಳಿ ಪತ್ತೆಯಾಗಿದ್ದ ಹಣ ಯಾರದ್ದು ಎಂದು ಸೂಕ್ತ ತನಿಖೆಯಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯ ಮಾಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪರ ಬ್ಯಾಟಿಂಗ್ ಮಾಡಲು ಅದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರು ನೀಡಿರಬಹುದು ಎನ್ನುವ ಬಗ್ಗೆ ಊಹಾಪೋಹಗಳೆದ್ದೀವೆ ಎಂದು ಅವರು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ತಮ್ಮ ಬಳಿ ಇದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಹೇಳಿಕೊಳ್ಳುತ್ತಿದ್ದಾರೆ. ಅಷ್ಟಿದ್ದಾಗ ಅವರಿಗೆ ಬಿಜೆಪಿ ಏಕೆ ಟಿಕೆಟ್ ಸಿಗಲಿಲ್ಲ. ಸುಳ್ಳು ಹೇಳುವ ಮನಸ್ಥಿತಿಯನ್ನು ಅಸ್ನೋಟಿಕರ್ ಸುಧಾರಿಸಿಕೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಸಮಾಜದ ಸೇವಕನ ಮುಖವಾಡ ಹಾಕಿಕೊಂಡಿರುವವ ಡೊಂಬರಾಟ ಕೆಲವು ದಿನದಲ್ಲಿ ಮುಗಿಯಲಿದೆ. ಪ್ರತಿಸಲ ಭ್ರಷ್ಟಾಚಾರದ ಆರೋಪದ ಹಾಕಿಹಾಕಿ ಅವರೇ ಸುಸ್ತಾಗಿದ್ದಾರೆ. ಅವರ ಮೇಲೆ ಐದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ಎಂದರು. ಸಮಾಜ ಸೇವಕರೊಬ್ಬರು 13ಕ್ಕೂ ಹೆಚ್ಚು ಪ್ರಕರಣಗಳಿರುವ ಸೈಲ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ಸಮಾಜ ಸೇವಕರು ಏಕೆ ಮಾತನಾಡುತ್ತಿಲ್ಲ ಎಂದು ರೂಪಾಲಿ ಪ್ರಶ್ನಿಸಿದರು.
ನನ್ನ ಮೇಲೆ ಪದೇಪದೇ ಭ್ರಷ್ಟಾಚಾರ ಆರೋಪ ಮಾಡಿದರೆ ನನ್ನ ಬಗ್ಗೆ ಜನರಿಗೆ ತಿರಸ್ಕಾರದ ಮನೋಭಾವ ಬೆಳೆಯುತ್ತದೆ ಇದರಿಂದ ತಮ್ಮ ಬೆಳೆ ಬೇಯಿಸಿಕೊಳ್ಳಬಹುದು ಎಂದು ಸಮಾಜ ಸೇವಕರು ಊಹಿಸಿದ್ದರು. ನಮಗೂ ಒಂದು ಕಾಲ ಬರಲಿದೆ ಆಗ ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದರು.
ಭ್ರಷ್ಟಾಚಾರ, ಭ್ರಷ್ಟಾಚಾರ ಎಂದು ಆರೋಪ ಮಾಡುತ್ತಲೇ ಇದ್ದಾರೆ. ಅವರ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದೇವೆ. ಸುಮಾರು ಹತ್ತು ತಿಂಗಳಾಯಿತು ಆದರೆ ಇದುವರೆಗೆ ಅವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಪೂರೈಸಲಿಲ್ಲ ಎಂದು ಅವರು ಹೇಳಿದರು.
ಅಸ್ನೋಟಿಕರ್ ಅವರ ಮನಸ್ಥಿತಿ ಹೇಗಿಯದೆಂದರೆ ಒಂದು ಕಡೆ ಹೋಗಿ ಗಂಗಾಧರ ಭಟ್ ಅವರಿಗೆ ಮತ ಹಾಕಿ ಎನ್ನುತ್ತಾರೆ. ಮತ್ತೊಂದು ಕಡೆ ಹೋಗಿ ನಾನು ಮೊದಲು ಜೆಡಿಎಸ್ನಲ್ಲಿದ್ದೆ ಹಾಗಾಗಿ ಚೈತ್ರಾ ಕೋಠಾರಕರ್ ಅವರಿಗೆ ಮತಹಾಕಿ ಎನ್ನುತ್ತಾರೆ ಮತ್ತೊಂದು ಕಡೆ ಹೋಗಿ ಸೈಲ್ ಅವರಿಗೆ ಮತಹಾಕಿ ಎನ್ನುತ್ತಾರೆ. ಒಬ್ಬ ಮಹಿಳೆಯನ್ನು ಸೋಲಿಸಲು ಅವರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ಗೊತ್ತಿಲ್ಲ ಎಂದರು.
ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…
ಹಾಸನ ವಿಡಿಯೋ ಪೆನ್ಡ್ರೈವ್ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…
ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ ಗುಡುಗು…
ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…
ಎರಡು ರಾಟ್ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…
ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…