ಕುಂದಾಪುರ: ಶಿವಮೊಗ್ಗದಿಂದ ಶಿರೂರು ಕಡೆಗೆ ಸಾಗುತ್ತಿದ್ದ ಇನೊವಾ ಕಾರ್ ಬೈಂದೂರು ತಾಲೂಕಿನ ಮೈಕಳದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ.
ಶಿವಮೊಗ್ಗದಿಂದ ಶಿರೂರು ಕಡೆಗೆ ಸಾಗುತ್ತಿದ್ದ ಇನೊವಾ ಕಾರ್ ಕೊಲ್ಲೂರು ಬೈಂದೂರು ಮಾರ್ಗದ ಮೈಕಳ ತಿರುವಿನಲ್ಲಿ ಬೇರೊಂದು ವಾಹನ ಅಡ್ಡ ಬಂದ ಕಾರಣ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ವಿದ್ಯುತ್ ಕಂಬ ಕಾರಿಗೆ ವರಗಿ ವಾಲಿಕೊಂಡಿದ್ದು ಇನೊವಾ ಕಾರ್ ಎದುರು ಗಡೆ ಜಖಂ ಗೊಂಡಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗದೆ ಪಾರಾಗಿದ್ದಾರೆ. ಅಪಾಯಕಾರಿ ಮೈಕಳ ತಿರುವಿನಲ್ಲಿ ರಸ್ತೆಯನ್ನು ಅಗಲಗೊಳಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.