News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಬ್ಯಾಂಕ್ ಮಹಿಳಾ ಸಿಬ್ಬಂದಿಯಿಂದ ಬ್ಯಾಂಕಿನಲ್ಲಿ ಧರಣಿ

Karwar: Women bank employees stage dharna at bank
Photo Credit : By Author

ಕಾರವಾರ: ಸರ್ಕಾರದ ಯೋಜನೆಯಂತೆ ತಾನು ಮಾಡಿದ ಬ್ಯಾಂಕ್ ಖಾತೆದಾರರಿಗೆ ಸರಿಯಾಗಿ ಸೌಲಭ್ಯ ನೀಡದೆ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು ಇಂಡಿಯಾ ಬ್ಯಾಂಕ್ ಶಾಖೆಯ ಬ್ಯಾಂಕಿನಲ್ಲಿ ಧರಣಿ ನಡೆಸಿದ ಘಟನೆ ಶುಕ್ರವಾರ ನಡೆಸಿದೆ.

ಪಂಕಜಾ ಎಸ್. ಅಲಗೇರಿಕರ ಎಂಬುವಳು, ಇಂಡಿಯಾ ಬ್ಯಾಂಕಿನಲ್ಲಿ ಬಿ.ಸಿ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ೨ ವರ್ಷಗಳಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಗ್ರಾಹಕರನ್ನು ಇಂಡಿಯಾ ಬ್ಯಾಂಕಿನಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆದಿದ್ದಾರೆ. ಅವರಿಗೆ ಬ್ಯಾಂಕಿನಿಂದ ಎ.ಟಿ.ಎಮ್ ಸಹ ಸಿಗಬೇಕು. ಆದರೆ ಇಂಡಿಯಾ ಬ್ಯಾಂಕಿನ ಬಿ.ಸಿ. ಪಂಕಜಾ ಎಸ್. ಅಲಗೇರಿಕರ ರವರು ಮಾಡಿದ ಗ್ರಾಹಕರೊಂದಿಗೆ ಬ್ಯಾಂಕಿನ ಸಿಬ್ಬಂದಿಗಳು ಸರಿಯಾಗಿ ನಡೆದುಕೊಳ್ಳದೆ, ಬ್ಯಾಂಕಿಗೆ ಬಂದರೆ ಏಕಾಏಕಿ ಸಿಟ್ಟಾಗುವುದು ಮಾಡುತ್ತಿದ್ದಾರೆ.

ಅದಲ್ಲದೇ ಪಂಕಜಾಗೂ ನಿನ್ನ ಗ್ರಾಹಕರನ್ನು ಬ್ಯಾಂಕಿಗೆ ಕಳಿಸಬೇಡ ಎಂದು ಬೈಯಲಾಗುತ್ತದೆ. ಇದರಿಂದ ಮಾನಸಿಕವಾಗಿ ರೋಸಿ ಹೋದ ಪಂಕಜಾ ಶುಕ್ರವಾರದಂದು ಇಂಡಿಯಾ ಬ್ಯಾಂಕಿನ ಶಾಖೆಯಲ್ಲಿ ನೆಲದ ಮೇಲೆ ಕುಳಿತು ಧರಣಿ ಮಾಡಿ ಶಾಖಾ ವ್ಯವಸ್ಥಾಪಕರು ಬಿ.ಸಿ.ಗೂ ಬ್ಯಾಂಕಿಗೂ ಸಂಬಂಧವಿಲ್ಲ.

ನಿಮ್ಮ ಗ್ರಾಹಕರನ್ನು ಇಲ್ಲಿಗೆ ಕಳಿಸಬೇಡಿ ಎಂದು ಲಿಖಿತವಾಗಿ ಬರೆದುಕೊಟ್ಟರೆ ಈ ಕೆಲಸ ಬಿಟ್ಟುಹೋಗುತ್ತೆನೆ. ಇಲ್ಲದಿದ್ದರೆ ನಾ ಮಾಡಿರುವ ಬ್ಯಾಂಕಿನ ಗ್ರಾಹಕರಿಗಾಗಿ ಧರಣಿ ಮುಂದುವರೆಸುತ್ತೆನೆ ಎಂದು ಪಟ್ಟು ಹಿಡಿದರು. ಕೊನೆಗೆ ಇಂಡಿಯಾ ಬ್ಯಾಂಕಿನ ಶಾಖೆಯ ಉಪ ವ್ಯವಸ್ಥಾಪಕ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಹಿನ್ನಲೆಯಲ್ಲಿ ಪಂಕಜಾ ಅಲಗೇರಿಕರ ತನ್ನ ಧರಣಿಯನ್ನು ಮೊಟಕುಗೊಳಿಸಿದ್ದಲ್ಲದೇ, ಕೆಲ ಸಮಯದ ವರೆಗೆ ಹೈಡ್ರಾಮಾಕ್ಕೆ ಕಾರಣವಾದ ಘಟನೆ ಕೊನೆಯಲ್ಲಿ ಸುಖಾಂತ್ಯಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು