News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಕಡಲಾಮೆಯನ್ನು ಸಂರಕ್ಷಣೆ ಮಾಡಿದ ಅರಣ್ಯ ಇಲಾಖೆ

The forest department has preserved the sea turtle
Photo Credit : By Author

ಕಾರವಾರ: ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಹಳೆ ಮುದಗಾ ಕಡಲ ತೀರದಲ್ಲಿ ಶುಕ್ರವಾರ ಕಡಲಾಮೆ (Sea turtle )ಹಗಲಿನಲ್ಲೇ ಮೊಟ್ಟೆ ಇಟ್ಟಿದ್ದು ಅರಣ್ಯ ಇಲಾಖೆಯು ಅವುಗಳನ್ನು ಇದ್ದ ಸ್ಥಳದಲ್ಲಿಯೇ ಸಂರಕ್ಷಿಸಿದೆ.

ಸ್ಥಳಿಯ ಮೀನುಗಾರರಾದ ದಾಮೋದರ ಎನ್ನುವವರು ಕಡಲತೀರದಲ್ಲಿ ಕಡಲಾಮೆ ಮೊಟ್ಟೆ ಇಡುತ್ತಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಡಿಸಿಎಫ್ ಪ್ರಶಾಂತ ಕುಮಾರ ಕೆ.ಸಿ. ಎಸಿಎಫ್ ಜಯೇಶ, ಮರೈನ್ ವಿಭಾಗದ ಡಿಆರ್ಎಫ್ಓಗಳಾದ ಪ್ರಕಾಶ ಯರಗಟ್ಟಿ ಹಾಗೂ ಚಂದ್ರಶೇಖರ ಕಟ್ಟಿಮನಿ, ಅರಣ್ಯ ರಕ್ಷಕ ಮೂರ್ತಿ ಅವರು ಸ್ಥಳಕ್ಕೆ ತೆರಳಿ ಕಡಲಾಮೆ ಮೊಟ್ಟೆ ಇಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಕಡಲಾಮೆ ಮೊಟ್ಟೆ ಇಟ್ಟು ತೆರಳಿದ ಬಳಿಕ ಆ ಮೊಟ್ಟೆಗಳನ್ನು ಇದ್ದ ಸ್ಥಳದಲ್ಲಿಯೇ ಸ್ಥಳೀಯರ ನೆರವಿನೊಂದಿಗೆ ಸಂರಕ್ಷಿಸಿಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಪ್ರಶಾಂತ ಅವರು ನವೆಂಬರ್ ನಿಂದ ಮಾರ್ಚ್ ವರೆಗೆ ಕಡಲಾಮೆಗಳು ಮೊಟ್ಟೆ ಇಡುವ ಸಮಯವಾಗಿದ್ದು ಈ ಬಗ್ಗೆ ಕಡಲತೀರದಲ್ಲಿ ನಿಗಾ ಇರಿಸುವಂತೆ ಎಲ್ಲ ಮೀನುಗಾರರಿಗೆ ಕೋಸ್ಟಲ್ ಮರೈನ್ ಸೆಲ್ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ವಾರವಷ್ಟೇ ಬ್ರೌಚರ್ ಹಂಚುವ ಮೂಲಕ ಮುದಗಾ ಮೀನುಗಾರರಲ್ಲಿ ಜಾಗೃತಿ ಮೂಡಿಸಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಕಡಲಾಮೆ ಮೊಟ್ಟೆ ಇಟ್ಟ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ ದಾಮೋದರ ಅವರಿಗೆ ಅರಣ್ಯ ಇಲಾಖೆಯಿಂದ ನೀಡಲಾಗುವ ಗೌರವ ಧನ ವನ್ನು ಡಿಸಿಎಫ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ರವಿ ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು