ಕಾರವಾರ: ಅರ್ಗಾದ ನೌಕಾನೆಲೆಯಲ್ಲಿ ಕ್ವಿಜ್ ನಲ್ಲಿ ಕೊಚ್ಚಿ ನೈಪುಣ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಪಡೆದರು.
ಕಾರವಾರದ ನೌಕಾನೆಲೆ ದೇಶದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ (ಹತ್ತು ಹಾಗೂ ಹನ್ನೇರಡನೇ ತರಗತಿಯ) ಬೃಹತ್ ಕ್ವಿಜ್ ಥಿಂಕ್ ೨೦೨೨ ಸ್ಪರ್ಧೆ ಏರ್ಪಡಿಸಿತ್ತು.
ದೇಶದ ವಿವಿಧ ಶಾಲೆಗಳ ೬೫೦೦ ವಿದ್ಯಾರ್ಥಿಗಳು ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಂಬಯಿ ಕಲ್ಯಾಣದ ಬಾಲ ಗುರುಕುಲ ಸ್ಕೂಲ್ ರನ್ನರ್ ಅಪ್ ಬಹುಮಾನ ಪಡೆಯಿತು.
ದೆಹಲಿಯ ರಾಂಚಿ ಪಬ್ಲಿಕ್ ಸ್ಕೂಲ್ ತೃತೀಯ ಸ್ಥಾನ ಹಾಗೂ ವಾರಣಾಸಿಯ ಸನ್ ಬೀಮ್ ಸ್ಕೂಲ್ ವಿದ್ಯಾರ್ಥಿಗಳ ಜೋಡಿ ನಾಲ್ಕನೇ ಸ್ಥಾನ ಪಡೆಯಿತು. ಕ್ವಿಜ್ ಥಿಂಕ್ ೨೦೨೨ ವಿಕ್ರಮಾದಿತ್ಯ ನೌಕೆಯ ವಿಮಾನದ ರನ್ ವೇ ಯಲ್ಲಿ ಹಾಕಿದ್ದ ವೇದಿಕೆಯಲ್ಲಿ ನಡೆದ್ದು ವಿಶೇಷ.
ಪ್ರಥಮ ಬಹುಮಾನವಾಗಿ ವಿಜೇತರಿಗೆ ಕಂಪ್ಯುಟರ್, ಫಲಕ ಹಾಗೂ ೭೫ ಸಾವಿರ ನಗದನ್ನು ಕ್ವಿಜ್ ಸ್ಪರ್ಧಿ ಇಬ್ಬರೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನೌಕಾನೆಲೆ ಮುಖ್ಯಸ್ಥ ಹರಿಕುಮಾರ್ ಹಾಗೂ ಅವರ ಪತ್ನಿ ಕಲಾ ಹರಿಕುಮಾರ್ ಪ್ರಶಸ್ತಿ ವಿತರಿಸಿದರು.
ಎರಡನೇ ಬಹುಮಾನವಾಗಿ ಮುಂಬಯಿ ಬಾಲಗುರು ಸ್ಕೂಲ್ ವಿದ್ಯಾರ್ಥಿಗಳಿಗೆ ತಲಾ ೫೦ ಸಾವಿರ ನಗದು, ಪ್ರಶಸ್ತಿ ಪತ್ರ, ಕಂಪ್ಯೂಟರ್ ನೀಡಲಾಯಿತು. ತೃತೀಯ ಸ್ಥಾನ ಪಡೆದವರಿಗೆ ತಲಾ ಹತ್ತು ಸಾವಿರ ರೂ.ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ನೌಕಾನೆಲೆ ಪಶ್ಚಿಮ ವಲಯದ ಕಮಾಂಡರ್ ಸುಶೀಲ್ ಕುಮಾರ್, ಕಾರವಾರ ಕದಂಬ ನೌಕಾನೆಲೆಯ ಕಮಾಂಡರ್ ಇದ್ದರು.