ಕಾರವಾರ: ಭಟ್ಕಳ ತಾಲೂಕಿನ ಕುಕ್ಕೋಡಿಯಲ್ಲಿ ಕಡವೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಮಾವಳ್ಳಿಯಲ್ಲಿ ಪ್ರಕಾಶ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ನಾಡಬಂದೂಕನ್ನು ಬಳಸಿ ಕಡವೆಯನ್ನು ಬೇಟೆಯಾಡಿದ್ದನು. ಕಾರ್ಯಾಚರಣೆಯಲ್ಲಿ ಡಿ.ಸಿ.ಎಫ್. ರವಿಶಂಕರ, ಸಿ.ಎ.ಸಿ.ಎಫ್ ಕೆ.ಟಿ.ಬೋರಯ್ಯ, ಆರ್.ಎಫ್.ಓ ಸವಿತಾ ದೇವಾಡಿಗ, ಡಿ.ಆರ್.ಎಫ್.ಓ ಸಂದೀಪ ಮಹಾದೇವ ಮಡಿ, ಯೋಗೇಶ ಮೋಗೇರ, ಮಂಜುನಾಥ ನಾಯ್ಕ ಮತ್ತು ಅರಣ್ಯ ರಕ್ಷಕರಾದ ಬಸವರಾಜ ಲಮಾಣಿ, ರಾಮ ನಾಯ್ಕ, ಮಹಾಬಲ ಗೌಡ ಹಾಗೂ ಕ್ಷೇಮಾಭಿವೃದ್ಧಿ ನೌಕರರಾದ ಅನಂತ ನಾಯ್ಕ, ರಾಮಚಂದ್ರ ದೇವಾಡಿಗ, ಅಣ್ಣಪ್ಪ ಹಸ್ಲರ ಇದ್ದರು.