News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ| ಜನರ ಸಮಸ್ಯೆ ಬಗೆಹರಿಯದಿದ್ದರೆ ಟೋಲ್ ಬಂದ್ ಮಾಡಿ ಪ್ರತಿಭಟನೆ: ಶಾಸಕಿ ರೂಪಾಲಿ ನಾಯ್ಕ

Janaspandana Sabha at Keravadi, lays foundation stone for works worth Rs 2 crore
Photo Credit :

ಕಾರವಾರ: ಅವೈಜ್ಞಾನಿಕ ಕಾಮಗಾರಿಯಿಂದ ಚೆಂಡಿಯಾ, ಅರ್ಗಾ, ಹಾಗೂ ಮುದಗಾ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.  ಸಮಸ್ಯೆಗೆ ಪರಿಹಾರ ಕಲ್ಪಿಸದೆ ಇದ್ದರೇ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು ಐಆರ್‌ಬಿಯವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚೆಂಡಿಯಾ, ಅರಗಾ ಮತ್ತು ಮುದಗಾ ಪ್ರದೇಶ ಸಂಪೂರ್ಣ ಜಲಾವೃತಗೊಳ್ಳುತ್ತಿದೆ. ರಸ್ತೆ ಕಾಮಗಾರಿ ನಡೆಯುವ ಪೂರ್ವದಲ್ಲಿ ಮಳೆ ನೀರು ತುಂಬುತ್ತಿರುಲಿಲ್ಲ. ಆದರೆ ಈಗ ಮಳೆ ನೀರುವ ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸದೆ ಇದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ಮುಕ್ತಾಯದ ಪೂರ್ವದಲ್ಲೇ ಟೋಲ್ ವಸೂಲಿ ಮಾಡುತ್ತಿದ್ದಾರೆ. ಜನರ ಸಮಸ್ಯೆ ಬಗೆ ಹರಿಸದೆ ಇದ್ದರೇ ಟೋಲ್ ಬಂದ್ ಮಾಡಿಸಿ ಪ್ರತಿಭಟಿಸಲಾಗುವುದು ಎಂದರು.

ಐಆರ್‌ಬಿಯವರು ಸಂಪೂರ್ಣವಾಗಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿದ್ದಾರೆ. ಇವರು ಮಾಡಿರುವ ಕಾಟಾಚಾರದ ಕಾಮಗಾರಿಯಿಂದಾಗಿ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದರು. ಕಾರವಾರದಿಂದ ಮಾದನಗೇರಿ ಕ್ರಾಸ್ ವರೆಗೆ ಮನಸ್ಸಿಗೆ ಬಂದAತೆ ಕಾಮಗಾರಿ ಮಾಡಿದ್ದಾರೆ. ನೀರು ಹರಿದು ಎಲ್ಲಿ ದಾರಿ ಬಿಡಬೇಕೋ ಅಲ್ಲಿ ದಾರಿ ಬಿಟ್ಟಿಲ್ಲ.

ಕೆಲವೆಡೆ ಎತ್ತರ ಹೆಚ್ಚಾಗಿದ್ದರಿಂದ ಗುಡ್ಡದಿಂದ ಹರಿದು ಬರುವ ನೀರು ಸರಾಗವಾಗಿ ಹರಿದು ಹೋಗಲು ದಾರಿ ಇಲ್ಲದೆ  ಜನವಸತಿ ಪ್ರದೇಶಗಳು ಮುಳುಗುವಂತಾಗಿದೆ ಎಂದರು.  ಚತುಷ್ಪಥಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸಿದ್ಧಪಡಿಸಿದ ಯೋಜನೆಯೇ ಸರಿಯಾಗಿಲ್ಲ ಎಂದ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು