ಕಾರವಾರ: ಬರುವ ಮೂರು ವರ್ಷದಲ್ಲಿ ಕೋಸ್ಟ್ ಗಾರ್ಡ್ ಮುಖ್ಯ ಕಚೇರಿ ನಿರ್ಮಾಣ

ಕಾರವಾರ: ಅಮದಳ್ಳಿಯ ೨೬ ಎಕರೆ ಪ್ರದೇಶದಲ್ಲಿ ೧೪೦ ಕೋಟಿ ವೆಚ್ಚದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ನ ನೂತನ ಕಚೇರಿಗೆ ಕಟ್ಟಡ ನಿರ್ಮಾಣವಾಗಲಿದ್ದು ೩ ವರ್ಷಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಐಜಿ ಮನೋಜ ಬಾಡ್ಕರ ತಿಳಿಸಿದ್ದಾರೆ.

ಅರ್ಗಾದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಳೆದ ೧೨ ವರ್ಷಗಳಿಂದ ಕೋಸ್ಟ್ ಗಾರ್ಡ್ ಕಚೇರಿ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ನಗರದಲ್ಲಿ ಕಡಲತೀರದ ಬಳಿ ಕಚೇರಿಗಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಜಾಗವನ್ನು ಗುರುತಿಸಿ ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿತ್ತು. ಈ ಸ್ಥಳದಲ್ಲಿ ಹಾವರ್ ಕ್ರಾಪ್ಟರ್ ಹಾಗೂ ಹೆಲಿಕ್ಯಾಪ್ಟರ್ ನಿಲುಗಡೆ ಸೇರಿದಂತೆ ವಿವಿಧ ಯೋಜನೆ ಸೇರಿದ್ದವು. ಆದರೆ ಇದರಿಂದ ಸ್ಥಳೀಯ ಮೀನುಗಾರರಿಗೆ ತೊಂದರೆ ಉಂಟಾಗುತ್ತದೆ ಎಂದು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ದೇಶದ ಗಡಿ ರಕ್ಷಣೆ, ಮೀನುಗಾರರ ರಕ್ಷಣೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಸಮಯದಲ್ಲಿ ನೆರವಾಗಲು ಕೋಸ್ಟ್ ಗಾರ್ಡ್ ಅತೀ ಅವಶ್ಯಕವಾಗಿದ್ದರಿಂದ ಕಾರವಾರ ತಾಲೂಕಿನ ವಿವಿಧೆಡೆ ಕಚೇರಿ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆದಿತ್ತು. ಅಂತಿಮವಾಗಿ ಅಮದಳ್ಳಿಯ ಕಂತ್ರಿವಾಡಾ, ಕಿಳಕೋಣ, ತೋಟನಕೇರಿ ಈ ಗ್ರಾಮಗಳ ಮಧ್ಯ ಭಾಗದಲ್ಲಿ ಇರುವ ಖಾಲಿ ಜಾಗವನ್ನು ಗಮನಿಸಿ ಇದು ಯೋಗ್ಯ ಸ್ಥಳ ಎಂದು ತೀರ್ಮಾನಿಸಿ ಈ ಜಾಗದ ಮಾಲೀಕರೊಂದಿಗೆ ಚರ್ಚಿಸಿದ ಆಧಿಕಾರಿಗಳು ಅವರಿಂದ ಮಾರುಕಟ್ಟೆ ದರದಲ್ಲಿ ಒಟ್ಟೂ ೨೬ ಎಕರೆ ಜಾಗವನ್ನು ಖರೀದಿಸಿದ್ದರು. ಈ ಜಾಗದಲ್ಲಿ ಅವಶ್ಯಕವಾದ ವಿವಿಧ ರೀತಿಯ ಹಲವು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಗಿದೆ.

ಕೋಸ್ಟ್ ಗಾರ್ಡ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿವಾಹ ವಸತಿ ಮತ್ತು ಓಟಿಎಂ(ವಿವಾಹೇತರ) ಮೂಲ ಸೌಕರ್ಯ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಮೂಲ ಸೌಕರ್ಯಗಳಲ್ಲಿ ವಿಧ ೨ ರ ೫೪ ವಿವಾಹಿತ ವಸತಿ ಮತ್ತು ಇತರೆ ನಿರ್ವಾಹಕರ ೫೪ ಕಟ್ಟಡಗಳು, ವಿಧ ೩ ರ ೩೧ ಕಟ್ಟಡಗಳು, ವಿಧ ೪ ರ ೨ ಕಟ್ಟಡಗಳು, ವಿಶೇಷ ವಿಧ ೪ ರ ೭ ಕಟ್ಟಡಗಳು ಹಾಗೂ ವಿಧ ೫ ರ ೫ ಕಟ್ಟಡಗಳು ನಿರ್ಮಾಣವಾಗಲಿವೆ. ಇವುಗಳಲ್ಲಿ ಅಧಿಕಾರಿ, ಅಧೀನ ಅಧಿಕಾರಿ, ಏಕಾಂಗಿ ವಸತಿ, ಅಡುಗೆ ಮನೆ, ಊಟದ್ ಹಾಲ್, ವೈದ್ಯಕೀಯ ಕೊಠಡಿ, ಕಾವಲು ಕೊಠಡಿ, ಕಾವಲು ಗೋಪುರ, ಮಳೆ ನೀರಿನ ಸಂಗ್ರಹ, ವೃಕ್ಷ ಕೃಷಿ, ಕಂಪೌAಡ್ ಹಾಗೂ ರಸ್ತೆಯನ್ನು ಒಳಗೊಂಡಿದೆ.

ಇದಲ್ಲದೇ ಕಾರು ಪಾರ್ಕಿಂಗ್, ಎಸ್.ಟಿ.ಪಿ ಹಾಗೂ ಸ್ಯಾನಿಟರಿ ಅಳವಡಿಕೆ ವ್ಯವಸ್ಥೆ ಸೇರಿ ಪರಿಸರಕ್ಕೆ ಪೂರಕವಾದ ಹಸಿರು ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಮದಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕೋಸ್ಟ್ ಗಾರ್ಡ್ ಕಚೇರಿಯಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದು. ಹರಿದು ಹೋಗುವ ನೀರು ಮೊದಲಿನಂತೆಯೇ ಹೋಗಲಿದ್ದು ಯಾವುದೇ ಅಡೆತಡೆ ಮಾಡಲಾಗುವುದಿಲ್ಲ. ಇನ್ನು ಈ ಗ್ರಾಮಕ್ಕೆ ಬರುವ ರಸ್ತೆ ಕಿರಿದಾಗಿದ್ದು ಅದನ್ನು ನಮಗೆ ನೀಡಿದರೆ ಅಭಿವೃದ್ಧಿ ಮಾಡಿ ಶಾಶ್ವತವಾಗಿ ಕೋಸ್ಟ್ ಗಾರ್ಡ್ ವತಿಯಿಂದ ಅಭಿವೃದ್ಧಿ ಆಗಲಿದೆ ಎಂದರು.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

3 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

3 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

3 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

4 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

4 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

4 hours ago