ಕಾರವಾರ: ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘವು ಸಿಐಟಿಯು ಸಂಘಟನೆಯ ಜೊತೆ ಸೇರಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಪಂಗೆ ಮನವಿ ಸಲ್ಲಿಸಿದರು.
ನಗರದ ರಂಗಮಂದಿರದ ಬಳಿಯಿಂದ ಮೆರವಣಿಗೆ ಆರಂಭಿಸಿದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರು. ಬಳಿಕ ಜಿಪಂ ಕಚೇರಿ ಬಳಿ ತೆರಳಿ ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ, ಘೋಷಣೆ ಹಾಕಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 25-30 ವರ್ಷಗಳಿಂದ ಪಂಚಾಯತ್ ನೌಕರರು ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇದರಲ್ಲಿ ಸಾಕಷ್ಟು ಪಂಚಾಯತ್ ನೌಕರರಿಗೆ ಜಿಪಂನಿಂದ ಖಾಯಂ ನೌಕರರು ಎಂದು ಅನುಮೋದನೆ ಆಗಿಲ್ಲ. ಅನುಮೋದನೆ ಆಗದೆ ಇರುವ ಸಿಬ್ಬಂದಿಗಳ ಹೆಸರನ್ನು ಪಂಚತಂತ್ರದಲ್ಲಿ ಸೇರ್ಪಡೆ ಸಹ ಮಾಡಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಗಿದೆ. ಜಿಪಂಗೆ ಸಲ್ಲಿಸಿದ ಮನವಿಯಲ್ಲಿ ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ.