ಬೈಂದೂರು: ಬೈಂದೂರು ತಾಲೂಕಿನ ನಾಡ ಹಾಲು ಉತ್ಪದಾಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಾಡ ಗುಡ್ಡೆಅಂಗಡಿಯಲ್ಲಿ ಶುಕ್ರವಾರ ನಡೆಯಿತು, ನಾಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಬಾಬು ಹೆಗ್ಡೆ,ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ,ಉಪ ವ್ಯವಸ್ಥಾಪಕ ಮಾಧವ್ ಐತಾಳ್,ಶರತ್ ಕುಮಾರ್ ಶೆಟ್ಟಿ,ಅಶೋಕ್ ಶೆಟ್ಟಿ ಸಂಸಾಡಿ,ನಾಡ ಗ್ರಾ.ಪಂ ಸದಸ್ಯ ಅರವಿಂದ ಪೂಜಾರಿ, ಕೆನಡಿ ಪಿರೇರಾ,ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕ ಸುರೇಂದ್ರ ನಾಡ ಗುಡ್ಡೆಹೋಟೆಲ್, ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಐರಿ ರೇಗೋ ಹಾಗೂ ರೋಜರಿ ಕ್ರೆಡಿಟ್ ಸೊಸೈಟಿ ಕುಂದಾಪುರ ಉಪಾಧ್ಯಕ್ಷ ಕಿರಣ್ ಲೋಬೊ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.