ಸಂಘಟನೆ ಮೂಲಕ ಶ್ರೀಮಠಕ್ಕೆ ಹೊಸ ಆಯಾಮ: ರಾಘವೇಶ್ವರ ಶ್ರೀ

ಗೋಕರ್ಣ: ಸಮಸ್ತ ಶಿಷ್ಯಸ್ತೋಮದ ಬುದುಕು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸದುದ್ದೇಶದಿಂದ ಶ್ರೀಶಂಕರಾಚಾರ್ಯರು ಅಶೋಕೆಯಲ್ಲಿ ಆರಂಭಿಸಿದ ಶ್ರೀ ರಘೂತ್ತಮ ಮಠ (ಇಂದಿನ ರಾಮಚಂದ್ರಾಪುರ ಮಠ) ಇದೀಗ ಸಂಘಟನಾತ್ಮಕವಾಗಿ ಹೊಸ ಆಯಾಮ ಪಡೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ಸಿದ್ದಾಪುರ, ಬಿದ್ರಕಾನ, ತಾಳಗುಪ್ಪ- ಇಡವಾಣಿ ಮತ್ತು ಬಾನ್ಕುಳಿ ವಲಯಗಳ ಸಮಸ್ತ ಶಿಷ್ಯರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. “ವೃತ್ತ ಆರಂಭದ ಬಿಂದುವಿನಲ್ಲೇ ಮತ್ತೆ ಅಂತ್ಯವಾಗುವಂತೆ 1300 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಆರಂಭಿಸಿದ ಮಠಕ್ಕೆ ಇಂದು ಇಡೀ ಶಿಷ್ಯಸಮೂಹ ಬಂದು ಸೇರುತ್ತಿದೆ. ಮಠವೂ ಮೂಲಕ್ಕೆ ಬಂದಿದೆ. ಶಿಷ್ಯರೂ ಬಂದಿದ್ದಾರೆ” ಎಂದು ಬಣ್ಣಿಸಿದರು.

ಈ ಅವಿಚ್ಛಿನ ಪರಂಪರೆಯ 36 ಪೀಠಾಧಿಪತಿಗಳು ಈ ಧರ್ಮಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈ ಅವಧಿಯಲ್ಲಿ ಸಂಘಟನಾತ್ಮಕವಾಗಿ ಶ್ರೀಮಠ ಹೊಸ ಸ್ವರೂಪ ಪಡೆದಿದ್ದು, ಜೇನುಗೂಡಿನಂಥ ವ್ಯವಸ್ಥಿತ ಸಂಘಟನೆ ಶ್ರೀಮಠದ ಅಧೀನದಲ್ಲಿ ರೂಪುಗೊಂಡಿದೆ. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಇದನ್ನು ಮುನ್ನಡೆಸುವುದು ಶಿಷ್ಯರ ಹೊಣೆ ಎಂದು ಸೂಚಿಸಿದರು.

ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು. ಸಮಾಜದಲ್ಲಿ ಜನಸಂಖ್ಯೆ ಕ್ಷೀಣವಾಗುತ್ತಿದ್ದು, ಸಾಂಪ್ರದಾಯಿಕ ಕೇಂದ್ರಗಳು ದುರ್ಬಲವಾಗುತ್ತಿವೆ. ಯುವಕರು ಉದ್ಯೋಗ ಅರಸಿ ಪಟ್ಟಣಗಳ ಹಾದಿ ಹಿಡಿಯುತ್ತಿದ್ದು, ಮತ್ತೆ ಕೆಲವೇ ವರ್ಷಗಳಲ್ಲಿ ಅವರು ಮರಳಿ ಹಳ್ಳಿಗಳಿಗೆ ಬರುವುದು ನಿಶ್ಚಿತ. ಅದುವರೆಗೂ ನಮ್ಮ ಸಂಸ್ಕøತಿ ದೀಪ ಆರದಂತೆ ಕಾಪಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಇದಕ್ಕೆ ಸಂಘಟನೆ ಬಲಗೊಳ್ಳಬೇಕಾದ್ದು ಅನಿವಾರ್ಯ ಎಂದರು.

ಸಮಾಜದಲ್ಲಿ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಆಗಬೇಕು. ಎಲ್ಲ ವಲಯ ಮಟ್ಟದಲ್ಲಿ ನಿರ್ದಿಷ್ಟ ದಿನದಂದು ಶ್ರೀಮಠಕ್ಕೆ ಸೇವೆ ಸಲ್ಲಿಸಿ ಗತಿಸಿದ ಕಾರ್ಯಕರ್ತರನ್ನು ನೆನಪಿಸಿಕೊಳ್ಳುವ ಕಾರ್ಯ ಆಗಬೇಕು. ಮನೆಗೊಬ್ಬ ಕಾರ್ಯಕರ್ತ ನಿರ್ಮಾಣವಾಗಬೇಕು; ಪ್ರತಿ ಕಾರ್ಯಕರ್ತರನ್ನು ಒಂದು ಕಾರ್ಯಕ್ಕೆ ನಿಯೋಜಿಸಿ ಅವರು ಸಕ್ರಿಯರಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶ್ರೀಸಂಸ್ಥಾನ ಹಾಗೂ ಶ್ರೀಮಠದ ಸ್ವರ್ಣಪಾದುಕೆ ಸಮಾಜದ ಮೂಲೆ ಮೂಲೆಗೂ ಸಂಚರಿಸುವ ಯೋಜನೆ ರೂಪಿಸಲಗಿದೆ. ಇದು ಪ್ರತಿಯೊಬ್ಬ ಶಿಷ್ಯಭಕ್ತರಿಗೆ ಪುಣ್ಯ ಸಂಪಾದನೆಗೆ ಮತ್ತು ಪುರುಷಾರ್ಥ ಸಾಧನೆ ಎರಡಕ್ಕೂ ಸುಲಭ ಮಾರ್ಗವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿವಿವಿ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ ಶಾಸ್ತ್ರಿ, ಉಪಾಧ್ಯಕ್ಷ ಸತೀಶ್ ಹೆಗಡೆ ಆಲ್ಮನೆ, ಮೋಹನ ಭಟ್ ಹರಿಹರ ಉಪಸ್ಥಿತರಿದ್ದರು.

Gayathri SG

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

16 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

30 mins ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

54 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

1 hour ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

1 hour ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

2 hours ago