News Karnataka Kannada
Tuesday, May 07 2024
ಉತ್ತರಕನ್ನಡ

ಗಣಪತಿ ಉಳ್ವೇಕರ್ ಗೆಲುವು ಶತ ಸಿದ್ಧ: ಸಚಿವ ಶಿವರಾಮ ಹೆಬ್ಬಾರ್

Shivaram Hebbar
Photo Credit :

ಅಂಕೋಲಾ : ಕಾಂಗ್ರೆಸ್ಸಿನ ದೊಡ್ಡ ನಾಯಕರು ದಿನಬೆಳಗಾದರೆ ಜೆಡಿಎಸ್ ಪಕ್ಷವನ್ನು ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ. ಇಂತಹ ಪಕ್ಷಕ್ಕೆ ಜೆಡಿಎಸ್ ಬೆಂಬಲ  ನೀಡಲು ಸಾಧ್ಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಅಂಕೋಲಾದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ವರ್ತನೆ ನೋಡಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡುವ ಆಶಯವಿದೆ. ಬಿಜೆಪಿಯನ್ನು ಬೆಂಬಲಿಸಿ ಎಂದೂ ಮನವಿ ಮಾಡುತ್ತೇವೆ ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲೇ ಭವಿಷ್ಯದ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸದಸ್ಯರ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಆಟ ನಡೆಯೋಕೆ ಸಾಧ್ಯವೇ ಇಲ್ಲ  ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ್ ಹೇಳಿದರು.
ಕಳೆದ ಬಾರಿ ಗಣಪತಿ ಉಳ್ವೇಕರ್ ಸೋತಿರಬಹುದು. ಆದರೆ ಈ ಬಾರಿ ಅವರ ಗೆಲುವು ಶತ:ಸಿದ್ಧ ಎಂದರು.
ರಾಜ್ಯದಲ್ಲಿ ನಮ್ಮ ಆಡಳಿತ ಇದೆ. ವ್ಯವಸ್ಥಿತ ಚುನಾವಣೆ ಎದುರಿಸುತ್ತಿದ್ದೇವೆ. ಈ ಸಲದ ಪರೀಕ್ಷೆಯಲ್ಲಿ ನಾವು ಉತ್ತೀರ್ಣ ಎಂದರು.
ಮತ ಪೋಲು ಮಾಡದಿರಿ:
ಪದವೀಧರರ ಕ್ಷೇತ್ರದಲ್ಲೂ ಮತಗಳನ್ನು ಸರಿಯಾಗಿ ಹಾಕಲಾಗದಂತಹ ಸ್ಥಿತಿಯನ್ನು ನೋಡಿದ್ದೇನೆ. ಈ ಸಲ ಒಂದು ಮತವೂ ಮಹತ್ವದ್ದು. ಹೀಗಾಗಿ ಮತ ಪೋಲಾಗದಂತೆ ನೋಡಿಕೊಳ್ಳಿ  ಎಂದರು. ಜಿಲ್ಲಾ
ಉಸ್ತುವಾರಿ ಉಷಾ ಹೆಗಡೆ, ಪ್ರಮುಖರಾದ ಭಾಸ್ಕರ ನಾರ್ವೇಕರ್, ರಾಜೇಂದ್ರ ನಾಯ್ಕ, ಪ್ರಶಾಂತ ನಾಯಕ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು