ಉಡುಪಿ: ಬಸ್ ಸಂಚಾರ ಇಲ್ಲದ ಒಳರಸ್ತೆಗಳಲ್ಲಿ ನರ್ಮ್ ಬಸ್ ಸಂಚಾರ ಮಾಡಲು ಆರ್ಟಿಒ ಮತ್ತು ಕೆಎಸ್ಆರ್ಟಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷೆೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮೊದಲಿಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಭಾಕರ ಪೂಜಾರಿ, ಕಲ್ಸಂಕ-ಅಂಬಾಗಿಲು ಕಡೆಗೆ ಸಂಚರಿಸುವ ಬಸ್ಗಳು ಒಳ ರಸ್ತೆೆಗೆ ಬರುವುದಿಲ್ಲ. ಬಹುತೇಕ ಬಸ್ಗಳು ಟ್ರಿಪ್ ಗಳನ್ನು ಕಡಿತಗೊಳಿಸಿ ಈ ಭಾಗದಲ್ಲಿ ಓಡಾಟವನ್ನೇ ನಿಲ್ಲಿಸಿವೆ ಎಂದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಆರ್ ಟಿಒ ಅಧಿಕಾರಿ, ಈಗಾಗಲೆ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಬಸ್ಗಳು ರೂಟ್ ನಿಯಮಾವಳಿ ಉಲ್ಲಂಘಸಿದ್ದನ್ನು ಪರಿಶೀಲಿಸಿ ನೋಟಿಸ್ ಕೊಟ್ಟಿದ್ದೇವೆ. ಇದಕ್ಕೂ ಸೂಕ್ತವಾಗಿ ಸ್ಪಂದಿಸದೇ ಹೋದಲ್ಲಿ ಶೋಕಾಸ್ ನೋಟಿಸ್ ನೀಡಿ 3ರಿಂದ 6 ತಿಂಗಳು ಕಾಲ ಪರ್ಮಿಟ್ನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ರೂಟ್ ನಿಯಮ ಉಲ್ಲಂಘಿಸುವ ಬಸ್ಗಳ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಿ ಎಂದು ಆರ್ಟಿಒಗೆ ಸೂಚಿಸಿದರು. ಬಸ್ ಸೌಕರ್ಯ ಇಲ್ಲದ ಭಾಗಕ್ಕೆೆ ಕೂಡಲೆ ಸರಕಾರಿ ನರ್ಮ್ ಬಸ್ ಓಡಿಸುವ ಬಗ್ಗೆೆ ಆರ್ಟಿಎ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದರು.