ಉಡುಪಿ: ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಇವರ ಸಹಯೋಗದಲ್ಲಿ ನಾಡಿನ ಜನಪದ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಬರುವ ಜೂನ್ 18 ರಂದು ವೈವಿಧ್ಯಮಯ ಜಾನಪದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದುನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯಲ್ಲಿ ಜಿಲ್ಲೆಯ 18 ರಿಂದ 50 ವರ್ಷ ವಯೋಮಿತಿಯೊಳಗಿನವರು ಎಲ್ಲರೂ ಭಾಗವಹಿಸಬಹುದು. ಗಾದೆ/ಒಗಟು ಹೇಳುವ ಸ್ಪರ್ಧೆ, ಜನಪದ ಗೀತೆ, ಜಾನಪದ ಗೀತೆ, ಜಾನಪದ ವಾದ್ಯ, ಜಾನಪದ ನೃತ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಭಾಗವಹಿಸಲು ಇಚ್ಛಿಸುವ ತಂಡಗಳು ತಮ್ಮ ಅರ್ಜಿಯನ್ನು ಭರ್ತಿ ಮಾಡಿ ಜೂ. 15ರೊಳಗೆ ಸಂಜೆ 6 ಗಂಟೆಯೊಳಗೆ ಅನುಷಾ ಆಚಾರ್ಯ, ತಲ್ಲೂರ್ಸ್ ತಾಂಬೂಲಂ, ಕಂರ್ಟ್ ಟವರ್, ಕಲ್ಪನಾ ಚಿತ್ರ ಮಂದಿರ ಎದುರು ಉಡುಪಿ, 576101 ಇಲ್ಲಿಗೆ ಕಳುಹಿಸಬೇಕೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಪ್ರಧಾನ ಕಾರ್ಯದರ್ಶಿ ರವಿರಾಜ ನಾಯಕ್, ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ಉಪಸ್ಥಿತರಿದ್ದರು.