ಸಂತೆಕಟ್ಟೆ ಸಮೀಪದ ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಶ್ರೀ ಬ್ರಹ್ಮ ಬೈದೇರುಗಳ ಕಾಲಾವಧಿ ನೇಮೋತ್ಸವದ ಪ್ರಯುಕ್ತ ಶಾಸಕ ಕೆ. ರಘುಪತಿ ಭಟ್ ಅವರು ಇಂದು ಬ್ರಹ್ಮ ಬೈದರ್ಕಳ ಗರೋಡಿಗೆ ಭೇಟಿ ನೀಡಿ ದರ್ಶನ ಪಡೆದರು.
ಈ ಸಂದರ್ಭದ ಸಂತೆಕಟ್ಟೆ ಕಲ್ಯಾಣಪುರ ಜಂಕ್ಷನ್ ಗೆ “ಕೋಟಿ ಚೆನ್ನಯ್ಯ ವೃತ್ತ” ಎಂದು ನಾಮಕರಣ ಮಾಡಲು ಸಹಕರಿಸಿದ ಶಾಸಕರಾದ ಕೆ ರಘುಪತಿ ಭಟ್ ಅವರನ್ನು ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಿದರು.