ಉಡುಪಿ: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಕಾಪು ಪೇಟೆಯಿಂದ ತಾಲೂಕು ಕಚೇರಿತನಕ ಪಾದಯಾತ್ರೆ ಮೂಲಕ ತೆರಳಿದ ವಿನಯ್ ಕುಮಾರ್ ಸೊರಕೆ ಅಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಕಾಪು ಪೇಟೆಯಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಬಿಜೆಪಿ ಸರಕಾರದ 40% ಕಮಿಷನ್ ,ಕ್ಷೇತ್ರದ ಸಂಸದೆ ,ಸಚಿವೆ ಶೋಭಾ ಕರಂದ್ಲಾಜೆಯವರ ವೈಫಲ್ಯ ಇತ್ಯಾದಿಗಳ ಬಗ್ಗೆ ಮುಖಂಡರು ನೆರೆದ ಸಾವಿರಾರು ಜನರ ಗಮನ ಸೆಳೆದರು.
10 ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.