ಉಡುಪಿ: ಕೊರೊನಾ ಕಾರಣದಿಂದ ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಲ ತೆಗೆದುಕೊಂಡವರು ಹಿಂದಿರುಗಿಸಿಲ್ಲ. ಇದರಿಂದ ಸಮಸ್ಯೆ ಆಗಿದೆ. ಮುಂದಿನ ದಿನಗಳಲ್ಲಿ ಮರುಪಾವತಿ ಆದ ನಂತರ ಎಲ್ಲರ ಹಣ ಹಿಂದಿರುಗಿಸುತ್ತೇವೆ.
ಇಲ್ಲದೆ ಹೋದರೆ, ನನ್ನ ಆಸ್ತಿ ಮಾರಾಟ ಮಾಡಿ ಆದ್ರೂ ಠೇವಣಿದಾರರ ಹಣ ಮರುಪಾವತಿ ಮಾಡುತ್ತೇನೆಂದು ಲಕ್ಷ್ಮೀನಾರಾಯಣ ಅವರು ಹೇಳಿದ್ದಾರೆ ಎಂದು ಆರೋಪಿ ಲಕ್ಷ್ಮೀನಾರಾಯಣ ಪರ ವಕೀಲ, ಮಿತ್ರ ಕುಮಾರ್ ಶೆಟ್ಟಿ ಹೇಳಿದ್ದಾರೆ
ಉಡುಪಿ ಕೋರ್ಟ್ ಆವರಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ನ್ಯಾಯಾಲಯವು ಜ.11ರ ವರೆಗೆ ಲಕ್ಷ್ಮೀನಾರಾಯಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಜ.2ಕ್ಕೆ ನಡೆಯಲಿದೆ ಎಂದರು.