ಉಡುಪಿ: ಆಟಿಸಮ್ ಸೊಸೈಟಿ ಉಡುಪಿ, ಕಮಲಾ ಬಾಳಿಗಾ ಟ್ರಸ್ಟ್ ಮತ್ತು ಡಾ. ಎ.ವಿ. ಬಾಳಿಗಾ ಆಸ್ಪತ್ರೆ, ಡಿಸಬಿಲಿಟಿ ಎನ್ ಜಿಒ ಅಲಯನ್ಸ್ ಬೆಂಗಳೂರು ಹಾಗೂ ಜೆಸಿಐ ಉಡುಪಿ-ಇಂದ್ರಾಳಿ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನದ ಅಂಗವಾಗಿ ಇದೇ ಬರುವ ಡಿ. 13ರಂದು ಉಡುಪಿಯ ಪುರಭವನದಲ್ಲಿ “ಕಲಾ ಸೌರಭ” ವಿಶೇಷ ಕುಸುಮಗಳ ಕೌಶಲ್ಯದ ಕಲವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ತಿಳಿಸಿದರು.
ಉಡುಪಿಯಲ್ಲಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷಚೇತನರ ಕೌಶಲ್ಯ ಮತ್ತು ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ತರಬೇತಿ ಮತ್ತು ನೆರವಿನಿಂದ ವಿಶೇಷಚೇತನರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಉಸ್ತುವಾರಿಗಳಾದ ಕೀರ್ತೇಶ್ ಎಸ್. ಹಾಗೂ ಶ್ರುತಿ ಶೆಟ್ಟಿ ಇದ್ದರು.