ಕುಂದಾಪುರ: ಕಂದಾವರ ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್ ಸಮೀಪವಿರುವ ಮದಗದಲ್ಲಿ ಈಜಲು ತೇರಳಿದ್ದ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ (28) ಮತ್ತು ಭರತ್ ಶೆಟ್ಟಿಗಾರ್ (16) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ನಾಲ್ಕು ಎಕರೆ ವಿಸ್ತಾರವನ್ನು ಹೊಂದಿರುವ ಉಳ್ಳೂರು- ಕಂದಾವರ ಬೊಬ್ಬರ್ಯ ಕೊಡ್ಲು ಮದಗಕ್ಕೆ ಇತ್ತಿಚಿಗೆ ವಾರಾಹಿ ಏತ ನೀರಾವರಿ ಯೋಜನೆ ಮೂಲಕ ನೀರನ್ನು ಹರಿಯಬೀಡಲಾಗಿತ್ತು.ಸಿಹಿ ನೀರಿನೊಂದಿಗೆ ಬೇಸಿಗೆಯಲ್ಲಿ ಮೈದುಂಬಿದ್ದ ಬೊಬ್ಬರ್ಯ ಕೊಡ್ಲು ಮದಗಕ್ಕೆ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ ಸೇರಿ 6 ಜನ ಈಜಲು ತೆರಳಿದ್ದಾರೆ.
ಅಂದಾಜು 10ಕ್ಕೂ ಅಧಿಕ ಅಡಿ ಆಳವನ್ನು ಹೊಂದಿರುವ ಮದಗದಲ್ಲಿ ಭರತ್ ಶೆಟ್ಟಿಗಾರ್ ಸ್ನಾನ ಮಾಡುತ್ತಿದ್ದಾಗ ಆಕಶ್ಮಿಕವಾಗಿ ಆಯತಪ್ಪಿ ಮದಗದಡಿಯಲ್ಲಿದ್ದ ಹೊಂಡಕ್ಕೆ ಬಿದ್ದಿದ್ದಾನೆ,ನೀರಿನಲ್ಲಿ ಮುಳುಗಿದ ಭರತ್ ನನ್ನು ರಕ್ಷಿಸಲು ರಾಜೇಂದ್ರ ಶೆಟ್ಟಿಗಾರ್ ಮುಂದಾಗಿದ್ದಾರೆ,ಈಜಲು ಬಾರದ ಇಬ್ಬರೂ ಮಗದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಶವವನ್ನು ಮೇಲಕ್ಕೆ ಎತ್ತಿದ್ದಾರೆ.ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಂದ್ರ ಶೆಟ್ಟಿಗಾರ್ ಅವರು ಶಂಕರನಾರಾಯಣ ಮದರ್ ತೆರೇಸಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.