ಉಡುಪಿ: ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಿದೆ. ಅದರೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದು, ಸಮುದ್ರ ಕೊರೆತದಿಂದ ಹಲವು ಮನೆಗಳು, ಬೀಚ್ ಮೂಲಸೌಕರ್ಯಗಳು ಕಡಲೊಡಲಲ್ಲಿ ಸೇರಿವೆ.
ಈ ನಡುವೆ ಮಳೆಗಾಲದಲ್ಲಿ ಹುಚ್ಚು ಸಾಹಸ ಮಾಡುವವರ ಯುವಕರ ಸಂಖ್ಯೆಯೂ ಏರುತ್ತಿದೆ. ಈ ನಿಟ್ಟಿನಲ್ಲಿ ಗೋವಾದ ದೂಧ್ ಸಾಗರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಗೋವಾ ಸರ್ಕಾರ ನಿಷೇಧ ಹೇರಿದೆ. ಆದರೆ ಕರ್ನಾಟಕದ ಅಂತಹ ನಿಷೇಧ ಇರದ ಕಾರಣ ಯುವಜನರ ಹುಚ್ಚು ಸಾಹಸ ಹೆಚ್ಚುತ್ತಿದೆ.
ಮಳೆಯಲ್ಲಿ ಮೈಮರೆತ ಯುವಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂತಹುದೇ ಒಂದು ಘಟನೆ ಬೈಂದೂರಿನಲ್ಲಿ ನಡೆದಿದೆ. ಬೈಂದೂರಿನ ಅರಿಶಿನ ಗುಂಡಿ ಜಲಪಾತಕ್ಕೆ ಭದ್ರಾವತಿಯ ಶರತ್ (23) ಭೇಟಿ ನೀಡಿದ್ದು, ಜಲಪಾತದಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು, ನಾಪತ್ತೆಯಾಗಿದ್ದಾನೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.