News Karnataka Kannada
Thursday, May 02 2024
ಉಡುಪಿ

ಅರಿಶಿನಗುಂಡಿ: ರೀಲ್ಸ್‌ ಮಾಡುತ್ತಿದ್ದ ವೇಳೆ ಜಲಪಾತದಲ್ಲಿ ಜಾರಿಬಿದ್ದು ಯುವಕ ಕಣ್ಮರೆ

Turmericundi: Youth goes missing after slipping into waterfall while doing reels
Photo Credit : News Kannada

ಉಡುಪಿ: ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಿದೆ. ಅದರೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದು, ಸಮುದ್ರ ಕೊರೆತದಿಂದ ಹಲವು ಮನೆಗಳು, ಬೀಚ್‌ ಮೂಲಸೌಕರ್ಯಗಳು ಕಡಲೊಡಲಲ್ಲಿ ಸೇರಿವೆ.

ಈ ನಡುವೆ ಮಳೆಗಾಲದಲ್ಲಿ ಹುಚ್ಚು ಸಾಹಸ ಮಾಡುವವರ ಯುವಕರ ಸಂಖ್ಯೆಯೂ ಏರುತ್ತಿದೆ. ಈ ನಿಟ್ಟಿನಲ್ಲಿ ಗೋವಾದ ದೂಧ್‌ ಸಾಗರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಗೋವಾ ಸರ್ಕಾರ ನಿಷೇಧ ಹೇರಿದೆ. ಆದರೆ ಕರ್ನಾಟಕದ ಅಂತಹ ನಿಷೇಧ ಇರದ ಕಾರಣ ಯುವಜನರ ಹುಚ್ಚು ಸಾಹಸ ಹೆಚ್ಚುತ್ತಿದೆ.

ಮಳೆಯಲ್ಲಿ ಮೈಮರೆತ ಯುವಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂತಹುದೇ ಒಂದು ಘಟನೆ ಬೈಂದೂರಿನಲ್ಲಿ ನಡೆದಿದೆ. ಬೈಂದೂರಿನ ಅರಿಶಿನ ಗುಂಡಿ ಜಲಪಾತಕ್ಕೆ ಭದ್ರಾವತಿಯ ಶರತ್‌ (23) ಭೇಟಿ ನೀಡಿದ್ದು, ಜಲಪಾತದಲ್ಲಿ ರೀಲ್ಸ್‌ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು, ನಾಪತ್ತೆಯಾಗಿದ್ದಾನೆ. ಕೊಲ್ಲೂರು ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು