News Karnataka Kannada
Thursday, May 09 2024
ಉಡುಪಿ

ಕಾಂಗ್ರೆಸ್ ನಿಂದ ಭರ್ಜರಿ ಬೈಕ್ ರ‍್ಯಾಲಿ: ಸಾವಿರಾರು ಕಾರ್ಯಕರ್ತರು ಭಾಗಿ

Thousands of Congress workers take part in bike rally
Photo Credit : News Kannada

ಮಲ್ಪೆ:  ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರ ಪ್ರಚಾರದ ಬೈಕ್ ರ‍್ಯಾಲಿಯನ್ನು ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿತ್ತು.

ಪಡುತೋನ್ಸೆ ಬೇಂಗ್ರೆಯ‌ ರಾಮ ಭಜನಾ ಮಂದಿರದಿಂದ ಆರಂಭಗೊಂಡ ಬೈಕ್ ರ‍್ಯಾಲಿಯು ಹೂಡೆಯಿಂದ ಗುಜ್ಜರಬೆಟ್ಟು ಮಾರ್ಗವಾಗಿ ತೊಟ್ಟಂ‌ನಿಂದ ವಡಭಾಂಡೇಶ್ವರ ಸರ್ಕಲ್‌ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಮುಕ್ತಾಯಗೊಂಡಿತು. ನಂತರ ನಡರದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

ಅಪಾರ ಕಾರ್ಯಕರ್ತರನ್ನೊಳಗೊಂಡ ಈ ರ‍್ಯಾಲಿ ಪಡುತೋನ್ಸೆ ಬೇಂಗ್ರೆಯ‌ ರಾಮ ಭಜನಾ ಮಂದಿರದಿಂದ ಬೈಕ್ ರ‍್ಯಾಲಿಯು ಹೊರಟು ಹೂಡೆಯಿಂದ ಗುಜ್ಜರಬೆಟ್ಟು ಮಾರ್ಗವಾಗಿ ತೊಟ್ಟಂ‌ನಿಂದ ವಡಭಾಂಡೇಶ್ವರ ಸರ್ಕಲ್‌ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಬೈಕ್ ರ‍್ಯಾಲಿ ಮುಗಿಸಿ ನಂತರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಪಾಲ್ಗೊಂಡರು.

ಮುಖ್ಯ ಭಾಷಣಕಾರರಾಗಿ ನಿಕೇತ್ ರಾಜ್ ಮೌರ್ಯ ಆಗಮಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್,
ಕೇರಳ ಸಂಸದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಎನ್.ಎಸ್.ಯು.ಐ ಉಪಾಧ್ಯಕ್ಷ ಶರತ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು