ಉಡುಪಿ: ಸಿಸಿಆರ್ಎಸ್ ಮಹಾನಿರ್ದೇಶಕಿ ಡಾ.ಮೀನಾಕುಮಾರಿ ಅವರು ಮಾಹೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದರು ಮತ್ತು ಮಣಿಪಾಲದ ಮಾಹೆಯಲ್ಲಿ ಸ್ಪೆಷಾಲಿಟಿ ಇಂಟಿಗ್ರೇಟಿವ್ ಟ್ರೆಡಿಷನಲ್ ಸಿದ್ದ ಮೆಡಿಸಿನ್ ಒಪಿಡಿ (ಸಿಸ್ಮೊ) ಅನ್ನು ಜೂನ್ 24ರಂದು ಉದ್ಘಾಟಿಸಿದರು.
ಆಯುರ್ವೇದ, ಸಿದ್ಧ ಮತ್ತು ಯೋಗಕ್ಕಾಗಿ ಮೂರು ವಿಭಾಗಗಳೊಂದಿಗೆ ಮಾಹೆ 2015 ರಲ್ಲಿ ಸೆಂಟರ್ ಫಾರ್ ಇಂಟಿಗ್ರೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ (ಸಿಐಎಂಆರ್) ಅನ್ನು ಸ್ಥಾಪಿಸಿತು. ಸಿಐಎಂಆರ್ ನ ಸಿದ್ಧ ವಿಭಾಗವು ಈಗ ಆಯುಷ್ ಸಚಿವಾಲಯದೊಂದಿಗೆ ಸೇರಿ ಮಣಿಪಾಲದಲ್ಲಿ ಸಿಸ್ಮೊ ಒಪಿಡಿಯನ್ನು ನಡೆಸುತ್ತಿದೆ. ಇನ್ನು ಡಾ.ಮೀನಾಕುಮಾರಿ ಮತ್ತು ಅವರ ತಂಡ ಡಾ.ಕ್ರಿಶ್ಚಿಯನ್, Dr.BR ಸೆಂಥಿಲ್ ಕುಮಾರ್ ಮತ್ತು ಡಾ.ಮರಿಯಪ್ಪನ್ ಇತ್ತೀಚೆಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಹಾಗೂ ಸಿಸಿಆರ್ಎಸ್ ತಂಡದ ಮಹಾನಿರ್ದೇಶಕ ಡಾ.ಗಿರಿಧರ್ ಕಿಣಿ, ಉಲ್ಲಾಸ್ ಕಾಮತ್, ಮಾಹೆಯ ಸಂಶೋಧನಾ ನಿರ್ದೇಶಕ ಡಾ.ಸತೀಶ್ ರಾವ್, ಮಾಹೆಯ ಆಯುರ್ವೇದ ವಿಭಾಗದ ಎಚ್ಒಡಿ ಡಾ.ಬಸವರಾಜ್, ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ, ಸಿದ್ಧ ವಿಭಾಗದ ಮುಖ್ಯಸ್ಥ ಡಾ.ಅರುಳ್ ಅಮುತನ್ ಉಪಸ್ಥಿತರಿದ್ದರು.
ಇದರಲ್ಲಿ ಪ್ರಸ್ತುತ, ರೋಗಿಗಳಿಗೆ ನಾಡಿ (ಪಲ್ಸ್) ರೋಗನಿರ್ಣಯ, ಶುದ್ಧೀಕರಣ ಚಿಕಿತ್ಸೆ, ಆಹಾರ ಚಿಕಿತ್ಸೆ, ಮನೆಮದ್ದುಗಳು, ಸಿದ್ಧ ಯೋಗ ಚಿಕಿತ್ಸೆ, ಕಾಯಕಲ್ಪಂ (ಆಂಟಿ ಏಜಿಂಗ್ ಥೆರಪಿ), ವರ್ಮಾ ಥೆರಪಿ, ಬಾಹ್ಯ ಚಿಕಿತ್ಸೆಗಳು, ಗಿಡಮೂಲಿಕೆ ಚಿಕಿತ್ಸೆಗಳು ಮತ್ತು ಸಿದ್ಧ ಉನ್ನತ ಶ್ರೇಣಿಯ ಔಷಧಿಗಳಂತಹ ವಿಶೇಷ ಸಿದ್ಧ ಚಿಕಿತ್ಸಾ ವಿಧಾನಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.. ಸಿಸ್ಮೋ ಒಪಿಡಿ ಭಾನುವಾರ ಮತ್ತು ಮೂರನೇ ಶನಿವಾರಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸುತ್ತದೆ. ಮಧುಮೇಹ ಮತ್ತು ಕಾಲು ಹುಣ್ಣು, ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು, ಸೋರಿಯಾಸಿಸ್ ನಂತಹ ದೀರ್ಘಕಾಲದ ಚರ್ಮ ರೋಗಗಳು, ಪಿತ್ತಜನಕಾಂಗದ ಕಾಯಿಲೆಗಳು, ಸೈನಸೈಟಿಸ್, ಬಂಜೆತನ, ಬೆನ್ನು ನೋವು ಮತ್ತು ಕೀಲು ನೋವಿನ ಬಗ್ಗೆ ವಿಶೇಷ ಗಮನ , ಚಿಕಿತ್ಸೆ ನೀಡಲಾಗುತ್ತದೆ.