ಉಡುಪಿ: ಕಾರಿನ ಚಕ್ರದಡಿಗೆ ಸಿಲುಕಿ ಕಾಲು ಮುರಿತಕ್ಕೊಳಗಾದ ಬೀದಿ ನಾಯಿಯೊಂದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಣೆ ಮಾಡಿದ ಘಟನೆ ನಗರದ ಮಾರುತಿ ವಿಥಿಕಾದಲ್ಲಿ ನಡೆದಿದೆ.
ತಕ್ಷಣವೇ ಒಳಕಾಡು ಅವರು ಗಾಯಗೊಂಡ ನಾಯಿಯನ್ನು ಬೈಲೂರು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿದರು. ಪರೀಕ್ಷಿಸಿದ ವೈದ್ಯರು ನಾಯಿ ಕಾಲು ಮುರಿದಿದ್ದು, ಎರಡು ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿವುದು ಎಂದು ತಿಳಿಸಿದ್ದಾರೆ.