ಪೆರ್ಡೂರು: ಮುಖ್ಯ ಶಿಕ್ಷಕನೋರ್ವ ಬೆಳ್ಳಂಬೆಳಿಗ್ಗೆಯೇ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಬಂದು ಶಾಲಾ ಜಗಲಿಯಲ್ಲೆ ಮಲಗಿದ ಘಟನೆ ಪೆರ್ಡೂರು ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಎಂಬಾತ ಕಂಠಪೂರ್ತಿ ಕುಡಿದು ಜಗಲಿಯಲ್ಲಿ ಮಲಗಿದ ಮುಖ್ಯ ಶಿಕ್ಷಕ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕನೋರ್ವ ಈ ರೀತಿ ಕಂಠಪೂರ್ತಿ ಕುಡಿದು ಶಾಲೆಯಲ್ಲಿ ಮಲಗಿದ್ದು ವಿಪರ್ಯಾಸವೇ ಸರಿ. ಈತ ಬೆಳಿಗ್ಗೆಯೇ ಈ ರೀತಿ ಮದ್ಯಪಾನ ಮಾಡಿದರೆ, ಇನ್ನೂ ಮಕ್ಕಳಿಗೆ ಏನೂ ಪಾಠ ಮಾಡುತ್ತಾನೆ ಎನ್ನುವುದು ಪೋಷಕರ ಆತಂಕವಾಗಿದೆ.
ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ, ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ತುಕಾರಾಮ ನಾಯಕ್, ರಮೇಶ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿ, ಬೈದ ಫ್ರೆಂಡ್ಸ್ ನ ಸತೀಶ್, ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.