ಹಾಸನ: ತಾತ ಮುತ್ತಾತ ಕಾಲದಿಂದಲೂ ಭೂಮಿಯಲ್ಲಿ ಉಳುಮೆ ಮಾಡಿ ಬೆಳೆ ಬೆಳೆದು ಕೊಂಡು ಜೀವನ ಸಾಗಿಸುತ್ತಿದ್ದು, ಆದರೇ ಈಗ ಏಕಾಏಕಿ ಈ ಜಮೀನಿನ ಅರಣ್ಯಕ್ಕೆ ಸೇರಿದೆ ಎಂದು ಎಲ್ಲಾ ರೈತರಿಗೂ ನೋ ಟಿಸು ನೀಡಿದ ಹಿನ್ನಲೆಯಲ್ಲಿ ಕಾರಣ ಕೇಳಲು ನಗರದ ಜಿಲ್ಲಾ ಅರಣ್ಯ ಇಲಾಖೆಗೆ ಭೂ ಮಾಲೀಕರಾದ ರೈತರು ಆಗಮಿಸಿ ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡರು.
ಜಾವಗಲ್ ಹೋಬಳಿಯ ಹತ್ತಾರು ಗ್ರಾಮದ ರೈತರು ಜಿಲ್ಲಾ ಅರಣ್ಯ ಭವನಕ್ಕೆ ಬಂದ ಅವರು, ನಮ್ಮ ತಾತ, ಮುತ್ತಾತ ಕಾಲದಿಂದಲೂ ನೂರಾರು ವರ್ಷಗಳಿಂದಲೂ ಜಮೀನಿನಲ್ಲಿ ಬೆಳೆ ಬೆಳೆದುಕೊಂಡು ಜೀವನ ಸಾಗಿಸುತ್ತಿರುವ ಜಮೀನನ್ನು ಅರಣ್ಯ ಇಲಾಖೆಯಿಂದ ಈಗ ಏಕಾಏಕಿ ನಮಗೆಲ್ಲಾ ನನೋಟಿಸ್ ಜಾರಿ ಮಾಡಿರುವುದು ನಮಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಸಾಗುವಳಿ ಚೀಟಿ ನೀಡಿ ೧೯೭೮-೭೯ ರಲ್ಲಿ ಪಾಣಿ ಆಗಿ ಖಾತೆ ಎಲ್ಲಾ ಆಗಿದೆ. ಆದರೇ ಈಗ ಅರಣ್ಯ ಇಲಾಖೆಯವರು ನೋಟಿಸ್ ನೀಡಿ ಅರಣ್ಯಕ್ಕೆ ಸೇರಬೇಕೆಂದು ಹೇಳುತ್ತಿದ್ದಾರೆ. ಇದುವರೆಗೂ ಕಂದಾಯವನ್ನು ಕೂಡ ಕಟ್ಟಿಸಿಕೊಳ್ಳಲಾಗಿದೆ. ಇದನ್ನು ಪ್ರಶ್ನೆ ಮಾಡಲೆಂದು ರೈತರು ಹಾಸನ ನಗರದಲ್ಲಿರುವ ಅರಣ್ಯ ಇಲಾಖೆಗೆ ಬಂದರೇ ಇಲ್ಲಿ ಯಾವ ಅಧಿಕಾರಿಗಳು ಕಛೇರಿಯಲ್ಲಿ ಇರುವುದಿಲ್ಲ. ನಮ್ಮ ಬಳಿ ಇರುವ ಪಾಣಿ ಮತ್ತು ಸಾಗುವಳಿ ಚೀಟಿ ತೋರಿಸಿದರೆ ಇವೆಲ್ಲಾ ನಕಲಿ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ತಾಲೂಕು ಕಛೇರಿಯಲ್ಲಿ ರೆಕಾರ್ಡ್ ಕೇಳಲು ಹೋದ್ರೆ ನಮ್ಮ ಬಳಿ ಇಲ್ಲ ಎಂದು ಅವರೊಂದು ನಾಟಕ ವಾಡುತ್ತಿದ್ದಾರೆ ಎಂದರು.
ಈ ಹಿಂದೆ ನಮಗೆ ಸಾಗುವಳಿ ಚೀಟಿ ಮತ್ತು ಪಾಣಿಯನ್ನು ಹೇಗೆ ಮಾಡಿಕೊಟ್ಟಿದ್ದರು ಜೊತೆಗೆ ಜಮೀನು ಮೇಲೆ ಸಾಲವನ್ನು ಕೂಡ ಪಡೆಯಲಾಗಿತ್ತು. ಕೇಳಿದರೇ ಮೈಸೂರು ಮಹಾರಾಜರದು ಎಂದು ಹೇಳಿದ್ದಾರೆ. ಅಜ್ಜಂಪುರ ಒಂದರಲ್ಲೆ ೫೭೦೦ ಎಕರೆ ಭೂಮಿ ಇದ್ದು, ಈಗ ಅವರಿಗೆಲ್ಲಾ ನೋಟಿಸ್ ಕೊಡಲಾಗಿದೆ. ಜಾವಗಲ್ ಹೋಬಳಿಯಲ್ಲಿ ಒಟ್ಟು ೧೧ ಗ್ರಾಮಗಳು ಇದಕ್ಕೆ ಸೇರುತ್ತದೆ. ನಮ್ಮ ಭೂಮಿ ನಮಗೆ ಬಿಟ್ಟುಕೊಡಬೇಕು ಇಲ್ಲವಾದರೇ ಅಹೋರಾತ್ರಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಇದೆ ವೇಳೆ ಎಚ್ಚರಿಸಿದರು.
ಇದೆ ವೇಳೆ ಭೂಮಿ ಕಳೆದುಕೊಂಡ ಸಂತೋಷ್ ಕುಮಾರ್, ಉಮೇಶ್, ದಯಾನಂದ್, ದೇವರಾಜು, ಕೇಶವಮೂರ್ತಿ, ಬೋರೇಗೌಡ ಸೇರಿದಂತೆ ನೂರಾರು ರೈತರು ಇದೆ ವೇಳೆ ಅರಣ್ಯ ಭವನದ ಮುಂದೆ ಜಮಾಯಿಸಿದ್ದರು.