News Karnataka Kannada
Sunday, May 12 2024
ಉಡುಪಿ

ಉಡುಪಿ: ರಿಕ್ಷಾಕ್ಕೆ ಹಾನಿ ಮಾಡುತ್ತಿದ್ದ ದುಷ್ಕರ್ಮಿ ಸೆರೆ

New Project 2024 01 30t165521.138
Photo Credit : News Kannada

ಉಡುಪಿ: ಮನೆ ಸಮೀಪ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳನ್ನು ಹಾನಿ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಡುಪಿಯ ಪಾಡಿಗಾರಿನ ಎಸ್ ಟಿ ಕಾಲನಿಯಲ್ಲಿ ನಡೆದಿದೆ.

ಗೋಪಾಲಕೃಷ್ಣ ಸಾಮಗ ಎಂಬುವವರ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾದಾಮಿ ಮೂಲದ ವಲಸೆ ಕಾರ್ಮಿಕ ಅಭಿಷೇಕ್ ಆರೋಪಿ. ಈತ ಕಳೆದ ಮೂರು ತಿಂಗಳಿಂದ ಈ ಕಾಲನಿಯಲ್ಲಿ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳನ್ನು ಹಾನಿಗೊಳಿಸುತ್ತಿದ್ದ. ಈ ಕೃತ್ಯ ಯಾರು ನಡೆಸುತ್ತಿದ್ದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಸ್ಥಳೀಯ ಮನೆಯೊಂದರ ಮಹಡಿ ಮೇಲೆ ಅಡಗಿ ಕುಳಿತಿದ್ದ ರಿಕ್ಷಾ ಚಾಲಕರ ಕಣ್ಣೆದುರೇ ಆತ ಕೈಯಿಂದ ನಂಬ‌ರ್ ಪ್ಲೇಟ್ ಗೆ ಹಾನಿ ಮಾಡುತ್ತಿದ್ದಾಗ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಮತ್ತೊಮ್ಮೆ ಕೃತ್ಯ ನಡೆಸದಂತೆ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿಕೊಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು