ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಕಾಡುಕೋಣ ವೊಂದು ಬಿಸಿಲಿನ ಬೇಗೆಗೆ ಬಸವಳಿದು ಕುಡಿಯುವ ನೀರಿಗಾಗಿ ಮನೆ ಬಾಗಿಲಿಗೆ ಬಂದ ಸಮಯದಲ್ಲಿ ಮನೆಯ ಯಜಮಾನಿ ಕಾಡು ಕೋಣನಿಗೆ ಉಪಚಾರ ಮಾಡುತ್ತಿರುವ ವೀಡಿಯೋ ಬಹಳಷ್ಟು ಸುದ್ದಿ ಮಾಡಿದೆ.
ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಗ್ರಾಮೀಣ ಭಾಗದ ಜನರಿಗೆ ಕಾಡು ಪ್ರಾಣಿಗಳ ಜೊತೆ ಇರುವ ಸಂಬಂಧ ಏನು ಎಂತಹದು ಎಂಬುದನ್ನು ಮಹಿಳೆಯ ಮಾತಿನ ಮೂಲಕ ಅರಿತು ಕೊಳ್ಳಬಹುದಾಗಿದೆ.