ಕುಂದಾಪುರ: ಬೈಂದೂರು ತಾಲೂಕಿನ ಮರವಂತೆ ಸಮೀಪ ಅರಬ್ಬಿ ಸಮುದ್ರ ಕಡಲ ತೀರ ಮತ್ತು ಸೌಪರ್ಣಿಕಾ ನದಿ ತೀರದ ಮಧ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -66 ರ ಸೇತುವೆ ಬಳಿ ರಕ್ಷಣಾ ಬೇಲಿ ಮುರಿದು ಹೋಗಿ ವರ್ಷಗಳು ಕಳೆದು ಹೋಗಿದ್ದರು ಸರಿಪಡಿಸುವ ಕಾರ್ಯ ಇನ್ನೂ ಕೂಡ ನಡೆದಿಲ್ಲ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಬೇಲಿಯನ್ನು ಮರು ಜೋಡಣೆ ಮಾಡುವಂತೆ ಸಾರ್ವಜನಿಕರರು ಆಗ್ರಹಿಸಿದ್ದಾರೆ.
ವರ್ಷಗಳ ಹಿಂದೆ ಟ್ರಕ್ ಗಾಡಿ ರಸ್ತೆ ಬದಿಯಲ್ಲಿರುವ ರಕ್ಷಣಾ ಬೇಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣದ ಬೇಲಿ ಮುರಿದು ಹೋಗಿದೆ.ರಸ್ತೆಯ ಕೆಳಗಡೆ 15 ಕ್ಕೂ ಹೆಚ್ಚಿನ ಆಳದ ಪ್ರಪಾತವಿದೆ, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಬೇಲಿಯನ್ನು ಮರು ಜೋಡಣೆ ಮಾಡುವ ಕೆಲಸವನ್ನು ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಕಂಪೆನಿ ಮಾಡಬೇಕಿದೆ.