ಕುಂದಾಪುರ: ಇಂಧನ ಸಚಿವ ಸುನಿಲ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಪ್ರಿಯಾಂಕ ಅವರು ಕೊಲ್ಲೂರಿನಿಂದ ಕಾರ್ಕಳಕ್ಕೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಸಾಮಾಜಿಕ ಕಳಕಳಿ ಮನೋಭಾವ ಸಾರ್ವಜನಿಕರ ಪ್ರಶಂಸೆ ಪಾತ್ರವಾಗಿದೆ.
ಸಚಿವ ಸುಶೀಲ್ ಕುಮಾರ್ ಕೊಲ್ಲೂರು ನಿಂದ ಕಾರ್ಕಳಕ್ಕೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ತಾಯಿ ಮತ್ತು ಮಗ ಬೈಕ್ ನಿಂದ ಸ್ಕಿಡ್ ಆಗಿ ಆಯತಪ್ಪಿ ಮಗುಚಿ ಬಿದ್ದಿದ್ದರು.
ಕೂಡಲೇ ಕಾರನ್ನು ನಿಲ್ಲಿಸಿದ ಸಚಿವರು ಮತ್ತು ಅವರ ಪತ್ನಿ ಕಾರಿನಿಂದ ಕೆಳಗಿಳಿದು ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗನನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಗಾಯಾಳುಗಳನ್ನು ಅವರ ಮನೆಗೆ ತಲುಪಿಸಿ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಸಚಿವರ ಅಂಗರಕ್ಷಕ ಪ್ರಭಾಕರ್,ವಾಹನ ಚಾಲಕರಾದ ಸಂತೋಷ್ ಕೆ ಆರ್, ಮಂಜು ಹಾಗೂ ಸ್ಥಳೀಯರು ಸಹಕರಿಸಿದರು.