News Karnataka Kannada
Saturday, April 27 2024
ಉಡುಪಿ

ಕುಂದಾಪುರ: ಮಾನವೀಯತೆ ಮೆರೆದ ಇಂಧನ ಸಚಿವ ಸುನಿಲ್ ಕುಮಾರ್

Kundapur: Power Minister Sunil Kumar has helped those injured in a bike accident.
Photo Credit : News Kannada

ಕುಂದಾಪುರ: ಇಂಧನ ಸಚಿವ ಸುನಿಲ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಪ್ರಿಯಾಂಕ ಅವರು ಕೊಲ್ಲೂರಿನಿಂದ ಕಾರ್ಕಳಕ್ಕೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಸಾಮಾಜಿಕ ಕಳಕಳಿ ಮನೋಭಾವ ಸಾರ್ವಜನಿಕರ ಪ್ರಶಂಸೆ ಪಾತ್ರವಾಗಿದೆ.

ಸಚಿವ ಸುಶೀಲ್ ಕುಮಾರ್ ಕೊಲ್ಲೂರು ನಿಂದ ಕಾರ್ಕಳಕ್ಕೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ತಾಯಿ ಮತ್ತು ಮಗ ಬೈಕ್ ನಿಂದ ಸ್ಕಿಡ್ ಆಗಿ ಆಯತಪ್ಪಿ ಮಗುಚಿ ಬಿದ್ದಿದ್ದರು.

ಕೂಡಲೇ ಕಾರನ್ನು ನಿಲ್ಲಿಸಿದ ಸಚಿವರು ಮತ್ತು ಅವರ ಪತ್ನಿ ಕಾರಿನಿಂದ ಕೆಳಗಿಳಿದು ಅಪಘಾತದಲ್ಲಿ ಗಾಯಗೊಂಡ ತಾಯಿ ಮತ್ತು ಮಗನನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸುರಕ್ಷಿತವಾಗಿ ಗಾಯಾಳುಗಳನ್ನು ಅವರ ಮನೆಗೆ ತಲುಪಿಸಿ ನೆರವಾಗಿದ್ದಾರೆ.

ಈ ಸಂದರ್ಭದಲ್ಲಿ ಸಚಿವರ ಅಂಗರಕ್ಷಕ ಪ್ರಭಾಕರ್,ವಾಹನ ಚಾಲಕರಾದ ಸಂತೋಷ್ ಕೆ ಆರ್, ಮಂಜು ಹಾಗೂ ಸ್ಥಳೀಯರು ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು