ಕುಂದಾಪುರ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿಯಲ್ಲಿ ಗುರುವಾರ ರೂಟ್ ಮಾರ್ಚ್ ಮೂಲಕ ಪೊಲೀಸ್ ಅಧಿಕಾರಿಗಳು ಜನ ಜಾಗೃತಿ ಮೂಡಿಸಿದರು.
ಗಂಗೊಳ್ಳಿ ವೀರೇಶ್ವರ ದೇವಸ್ಥಾನ ಬಳಿಯಿಂದ ಆರಂಭಗೊಂಡ ಪೊಲೀಸ್ ರೂಟ್ ಮಾರ್ಚ್ ಶ್ರೀರಾಮಂದಿರದಲ್ಲಿ ಸಂಪನ್ನಗೊಂಡಿತು.ಕುಂದಾಪುರ ಡಿವೈಎಸ್ಪಿ,ಬೈಂದೂರು ಸರ್ಕಲ್ ಹಾಗೂ ಗಂಗೊಳ್ಳಿ ಠಾಣೆಯ ಪಿಎಸ್ಐ ವಿನಯ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೂಟ್ ಮಾರ್ಚ್ ಸುಮಾರು 3.5KM ವರೆಗೆ ಸಾಗಿತು.ಪೊಲೀಸರು ಮತ್ತು ಸಿಎಪಿಎಫ್ ಸಿಬ್ಬಂದಿಗಳು ರೂಟ್ ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.
ಗಂಗೊಳ್ಳಿ ಮುಸ್ಲಿಂ ಮುಖಂಡರು ಮತ್ತು ಹಿಂದೂ ಮುಖಂಡರುಗಳು ಪೊಲೀಸ್ ಅಧಿಕಾರಿಗಳನ್ನು ಮಾಲಾರ್ಪಣೆ ಮಾಡಿ ಹೂಗುಚ್ಛವನ್ನು ನೀಡುವ ಮುಖೇನ ಬರಮಾಡಿಕೊಂಡಿರುವುದು ವಿಶೇಷವಾಗಿತ್ತು.