ಕುಂದಾಪುರ: ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವಂತೆ ಮತದಾರರಿಗೆ ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಆಮಂತ್ರಣ ಪತ್ರಿಕೆಯ ಮುಖೇನ ಕರೆಯೊಲೆ ನೀಡಿದೆ.
ಮದುವೆ ಆಮಂತ್ರಣ ಪತ್ರಿಕೆಯಂತೆ ಮುದ್ರಿಸಿರುವ ಮತದಾನದ ಮಮತೆಯ ಕೆರೆಯೊಲೆಯಲ್ಲಿ ದಿನಾಂಕ ಸಹಿತ ಸಮಯವನ್ನು ಮುದ್ರಿಸಲಾಗಿದೆ. ನಿಮ್ಮ ಹೆಸರು ನಮ್ಮ ಚುನಾವಣಾ ಮತದಾನ ಪಟ್ಟಿಯಲ್ಲಿದೆ ತಪ್ಪದೇ ಬಂದು ಮತದಾನ ಮಾಡಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ನಮ್ಮ ಮತ ನಮ್ಮ ಭವಿಷ್ಯ ಎನ್ನುವ ಧ್ಯೇಯವಾಕ್ಯವನ್ನು ಸಾರಲಾಗಿದ್ದು ಮತದಾರರ ಆಮಂತ್ರಣ ಪತ್ರಿಕೆ ನೋಡುಗರ ಮನ ಸೆಳೆಯುವಂತೆ ಇದೆ.