News Karnataka Kannada
Monday, April 29 2024
ಉಡುಪಿ

ಕುಂದಾಪುರ: ಹಸ್ತಿನಾವತಿ ಕಾದಂಬರಿ ಅನಾವರಣ

Kundapur: Hastinavathi novel unveiled
Photo Credit : News Kannada

ಕುಂದಾಪುರ: ಬರೆಯುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಕಲೆಯ ಸ್ಪರ್ಶದಿಂದ ಬದುಕು ಸುಂದರವಾಗುತ್ತದೆ. ಕಲಾತ್ಮಕ ಜಗತ್ತಿನ ಅನುಭವ ಖುಷಿ ಕೊಡುವಂತದ್ದು ಎಂದು ಲೇಖಕ ಹಿರಿಯ ಪತ್ರಕರ್ತ ಜೋಗಿ ಹೇಳಿದರು.

ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ನಡೆದ ‘ಹಸ್ತಿನಾವತಿ’ ಕಾದಂಬರಿ ಮರು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಚಿಕ್ಕಂದಿನಲ್ಲಿ ಶಿವರಾಮ ಕಾರಂತರ ಭಾಷಣ ಕೇಳಿ ಬೆಳೆದವರು‌ ಅದುವೇ ನಮ್ಮನ್ನು ಇಲ್ಲಿ ತಂದು ನಿಲ್ಲಿಸಿದೆ.ಒಂದು ಹಾಡು ಬರೆದರೆ ಅದು ಎಷ್ಟು ವರ್ಷ ಕಳೆದರೂ ನನ್ನ ಹಾಡು ಅನ್ನುವ ಭಾವ ಇರುತ್ತದೆ.ಕಥೆ, ಕಾದಂಬರಿ ಬರೆದರೂ ಇದೇ ಭಾವ ಬರುತ್ತದೆ.ಬರವಣಿಗೆಯಲ್ಲಿ ಸಾರ್ಥಕತೆಯ ಬದುಕು ಅಡಕವಾಗಿರುತ್ತದೆ.ಸಾಹಿತ್ಯ ಲೋಕಕ್ಕೆ ಮೊಗೇರಿ ಗೋಪಾಲಕೃಷ್ಣ ಅಡಿಗರಂತಹ ಅತ್ಯದ್ಭುತ ಲೇಖಕರನ್ನು ಕೊಟ್ಟ ಹೆಗ್ಗಳಿಕೆಗೆ ಕುಂದಾಪುರ ಪಾತ್ರವಾಗಿದೆ ಎಂದರು.

ಕವಿ ಜೋಗಿ‌ ಅವರ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿದ ಬೆಂಗಳೂರು ವಿವಿ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿ ಮಾತನಾಡಿ ಕೃತಿಯಲ್ಲಿ ರಾಜಕೀಯ,ಧಾರ್ಮಿಕ, ಪ್ರೇಮಕತೆ ಎಲ್ಲವೂ ಇದೆ. ಮುಖ್ಯವಾಗಿ ಯುವಕರು ಓದಬೇಕಾದ ಪುಸ್ತಕವಿದು ಎಂದರು.

ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಒಳನೋಟ ತೆರೆದಿಟ್ಟರು. ಕುಂದಾಪುರದ ವಕೀಲ ಸತೀಶ್ಚಂದ್ರ ಕಾಳಾವರ್ಕರ್ ಶುಭಹಾರೈಸಿದರು.

ಕಾಲೇಜಿನ ಪ್ರಿನ್ಸಿಪಾಲ್ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್‍ಯಕ್ರಮದ ಬಳಿಕ ವಿದ್ಯಾರ್ಥಿಗಳ ಜತೆ ಜೋಗಿಯವರ ಸಂವಾದ ನಡೆಯಿತು.

ಜನಸೇವಾ ಟ್ರಸ್ಟ್‌ನ ಸಂಚಾಲಕ ವಸಂತ ಗಿಳಿಯಾರು ಪ್ರಸ್ತಾವಿಸಿದರು,ಪತ್ರಕರ್ತ ಕೆ.ಸಿ. ರಾಜೇಶ್ ಕಾರ್‍ಯಕ್ರಮ ನಿರೂಪಿಸಿದರು, ರಾಘವೇಂದ್ರ ರಾಜ್ ಸಾಸ್ತಾನ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು