ಕುಂದಾಪುರ: ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಂಗೊಳ್ಳಿ ಅಳಿವೆ ಬಾಗಿಲಿನ ಸಮುದ್ರ ತೀರದಲ್ಲಿ ಸುಮಾರು 4,000 ಕುರುಡಿ ಮೀನಿನ ಮರಿಗಳನ್ನು ಮಂಗಳವಾರ ಬಿಡಲಾಯಿತು.
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರ ತೀರದಲ್ಲಿ ಕುರುಡಿ ಮೀನಿನ ಮರಿಗಳನ್ನು ನೀರಿಗೆ ಬಿಟ್ಟು ಮಾತನಾಡಿ ಪ್ರತಿಕೂಲ ಹವಾಮಾನ ಮತ್ತು ಬದಲಾದ ವ್ಯವಸ್ಥೆಯಲ್ಲಿ ಇತ್ತಿಚಿನ ದಿನಗಳಲ್ಲಿ ಸಮುದ್ರದಲ್ಲಿ ಮೀನಿನ ಸಂತತಿ ನಾಶವಾಗುತ್ತಿದೆ.ಮೀನುಗಾರರ ಹಿತ ದೃಷ್ಟಿಯಿಂದ ಸಂತಾನಭಿವೃದ್ಧಿಯೊಂದಿಗೆ ದ್ವಿಗುಣಗೊಳ್ಳುವ ಕುರುಡಿ ಮೀನಿನ ಮರಿಗಳನ್ನು ಸಮುದ್ರಕ್ಕೆ ಬೀಡಲಾಗಿದೆ ಇದು ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.
ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಸದಸ್ಯರಾದ ನಾಗರಾಜ ಖಾರ್ವಿ,ಬಸವ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಹಿರಿಯ ಮೀನುಗಾರರಾದ ರಾಮಪ್ಪ ಖಾರ್ವಿ,ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್,ಉಪ ನಿರ್ದೇಶಕ ಶಿವಕುಮಾರ್,ಬಂದರು ನಿರ್ದೇಶಕ ಕುಮಾರ ಸ್ವಾಮಿ,ಎಡಿಎಫ್ ಸುಮಲತಾ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕಿನ ಗಂಗೊಳ್ಳಿ ಸೇರಿದಂತೆ ಬೈಂದೂರು ತಾಲೂಕಿನ ಕೊಡೇರಿ ಕಡಲ ತೀರದಲ್ಲಿ 4000, ಪಡುವರಿ ಅಳಿವೆಕೋಡಿಯಲ್ಲಿ 4000 ಹಾಗೂ ಶಿರೂರು ಅಳ್ವಿಗದ್ದೆಯಲ್ಲಿ 4,000 ಒಟ್ಟು 16,800 ಕುರುಡಿ ಮೀನಿನ ಮರಿಗಳನ್ನು ಕಡಲ ತೀರಕ್ಕೆ ಬಿಡಲಾಗಿದೆ.ಸಮುದ್ರ ನೀರಿಗೆ ಒಗ್ಗಿಕೊಂಡು ಮೀನಿನ ಮರಿ ಬೆಳವಣಿಗೊಂಡು ಸಂತಾಭಿವೃದ್ಧಿಯಲ್ಲಿ ತೊಡಗಿಕೊಂಡರೆ ಮೀನಿನ ಸಂತತಿ ವೃದ್ಧಿಯಾಗುವ ನಿರೀಕ್ಷೆ ಇದೆ.
ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…
ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.
ಬಸ್ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇಯಲ್ಲಿ…
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್ಸಿಎಲ್ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…
ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ…
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…