ಕುಂದಾಪುರ : ಹೊನ್ನನಕೇರಿ ತೋಡಿಗೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ಡಿ. 18ರಂದು ಸಂಜೆ ನಡೆದಿದೆ. ಸ್ಥಳೀಯ ನಿವಾಸಿ 44ವರ್ಷದ ಸತೀಶ್ ಮೊಗವೀರ ಮೃತ ದುರ್ದೈವಿ.
ಇವರು ಮನೆಗೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದಿದ್ದರು ಎನ್ನಲಾಗಿದೆ. ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸತೀಶ್ ಅವರು ಎಲೆಕ್ಟ್ರಿಷಿಯನ್ ಕಂಟ್ರಾಕ್ಟ್ ದಾರರಾಗಿದ್ದು, ತಾಯಿ ಹಾಗೂ ಹೆಂಡತಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.