ಕುಂದಾಪುರ: ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೋಷ ನಗರದಲ್ಲಿರುವ ಹಿಂದೂ ರುದ್ರಭೂಮಿ ಪಾಳು ಬಿದ್ದು ಹೋಗಿದ್ದು ಸಂಪೂರ್ಣ ದುರಾವಸ್ಥೆಯಲ್ಲಿದೆ. ರುದ್ರಭೂಮಿ ಮುಳ್ಳಿ ಪೋದೆಗಳಿಂದ ಆವೃತ್ತವಾಗಿದ್ದು ಶವಗಳ ಸಂಸ್ಕಾರವನ್ನು ಮಾಡುವುದೆ ಕಷ್ಟಕರವಾಗಿದೆ.
ಹೆಮ್ಮಾಡಿ ಸಂತೋಷ ನಗರದಲ್ಲಿರುವ ಹಿಂದೂ ರುದ್ರಭೂಮಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲ,ನೀರಿನ ಅನುಕೂಲತೆಗಳಿಲ್ಲ,ರಸ್ತೆ ಮತ್ತು ಸ್ಮಶಾಣದ ಸುತ್ತಲೂ ಮುಳ್ಳಿನ ಪೋದೆಗಳು ಬೆಳೆದು ನಿಂತಿದೆ,ಕಲ್ಲಿನ ಪಾಗಾರ ಬಿದ್ದು ಹೋಗಿದೆ ದುಸ್ಥಿಯಲ್ಲಿರುವ ರುದ್ರಭೂಮಿಯನ್ನು ಬಳಕೆ ಮಾಡಲು ಸಾಧ್ಯವಾಗದೆ ಗ್ರಾಮದ ಜನರು ಶವ ಸಂಸ್ಕಾರ ಮಾಡಲು ಕುಂದಾಪುರ ಸ್ಮಶಾನಕ್ಕೆ ಹೋಗ ಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ.
ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಬೇಕೆಂದು ಶ್ರೀ ಮುಕ್ತಿಧಾಮ ಹಿಂದೂ ರುದ್ರಭೂಮಿ ಸಂಘಟನೆ ಆಗ್ರಹಿಸಿದೆ.
ಸುಮಾರು 60 ಕ್ಕೂ ಅಧಿಕ ವರ್ಷಗಳಿಂದ ಹಿಂದೂ ಸಮುದಾಯದ ಬಾಂಧವರು ಉಪಯೋಗಿಸಿ ಕೊಂಡು ಬರುತ್ತಿರುವ ಹೆಮ್ಮಾಡಿ ಸಂತೋಷ ನಗರದ ಸರ್ವೆ ನಂಬರ್ 136/2 ರಲ್ಲಿ ಇರುವ ಹಿಂದೂ ರುದ್ರಭೂಮಿಗೆ 0.23 ಸೆಂಟ್ಸ್ ಜಾಗವನ್ನು ಕಾಯ್ದಿರಿಸಲಾಗಿದೆ.ರುದ್ರಭೂಮಿ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮ ಮಾಡಿಕೊಂಡಿದ್ದಾರೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಿದ ಜಾಗವನ್ನು ಸರ್ವೆ ಮಾಡಿ ಗಡಿಗುರುತುಗಳನ್ನು ಮಾಡಿಕೋಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರುದ್ರಭೂಮಿ ಅಭಿವೃದ್ಧಿಗೊಂಡರೆ ಗ್ರಾಮದ ಜನರಿಗೆ ಅನುಕೂಲ: ಪ್ರಗತಿಯನ್ನು ಹೊಂದುತ್ತಿರುವ ಹೆಮ್ಮಾಡಿ ಗ್ರಾಮದಲ್ಲಿ ಏರುಗತ್ತಿಯಲ್ಲಿ ವಾಸ್ತವ್ಯದ ಮನೆಗಳು ನಿರ್ಮಾಣವಾಗುತ್ತಿದೆ ಜನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.ಹೆಮ್ಮಾಡಿ ಗ್ರಾಮದಲ್ಲಿರುವ ಸ್ಮಶಾನವನ್ನು ಅಭಿವೃದ್ಧಿ ಪಡಿಸಿದರೆ ಹೆಮ್ಮಾಡಿ ಗ್ರಾಮ ಮಾತ್ರವಲ್ಲದೆ ಆಸುಪಾಸಿ ಊರುಗಳಾದ ಕಟ್ಟು,ತುಳಸಿ,ಹರೆಗೋಡು,ಕನ್ನಡ ಕುದ್ರು,ಕಟ್ ಬೇಲ್ತೂರು,ಜಾಲಾಡಿ,ಹೊಸ್ಕಳಿ ಸೇರಿದಂತೆ ಇನ್ನಿತರ ಗ್ರಾಮದ ಜನರಿಗೆ ಅನುಕೂಲವಾಗಲಿದೆ.
ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…
ಸ್ಯಾಂಡಲ್ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…
ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…
ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂಕೋರ್ಟ್ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.