News Karnataka Kannada
Friday, May 03 2024
ಉಡುಪಿ

ಕುಂದಾಪುರ: ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಮೂಗ ಯುವಕನ ರಕ್ಷಣೆ

Deaf and dumb youth rescued from helpless condition
Photo Credit : News Kannada

ಕುಂದಾಪುರ: ಮಾನಸಿಕ ಸ್ಥಿಮಿತ ಕಳೆದುಕೊಂಡು ಒಂದು ವಾರಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಹಾಗೂ ಮೂಗ ಯುವಕನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಇತ್ತೀಚೆಗೆ ತಲ್ಲೂರು ಎಂಬಲ್ಲಿ ನಡೆದಿದೆ.

ತಲ್ಲೂರು ಪರಿಸರದಲ್ಲಿ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಯುವಕನನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರು ಗಮನಿಸಿದರು. ಆತನನ್ನು ವಿಚಾರಿಸಿದಾಗ ಆತನಿಗೆ ಬಾಯಿ ಮತ್ತು ಕಿವಿ ಕೇಳದೆ ಇರುವುದು ತಿಳಿದು ಬಂದಿದೆ. ಇದರಿಂದ ಅವರಿಗೆ ಆತನ ಹೆಸರು, ಊರು, ವಿಳಾಸ ತಿಳಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡ ಆತ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದನು. ಅಸಹಾಯಕ ಸ್ಥಿತಿಯಲ್ಲಿದ್ದ ಈ ಯುವಕನಿಗೆ ಸ್ಥಳೀಯರು ಆಶ್ರಯ ಕಲ್ಪಿಸಿದರು.

ಬಳಿಕ ಈ ಕುರಿತು ಉಡುಪಿಯ ಸಾಮಾಜಿಕ ಕಾರ್ಯ ಕರ್ತ ನಮ್ಮ ಭೂಮಿಯ ರಾಮಾಂಜಿ ಅವರಿಗೆ ಮಾಹಿತಿಯನ್ನು ನೀಡಿದರು. ಸ್ಥಳಕ್ಕೆ ಆಗಮಿಸಿದ ರಾಮಾಂಜಿ ಆ ಯುವಕನನ್ನು ಕಾರ್ಕಳದ ಪಳ್ಳಿ ಎಂಬಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಆಶಯ ಕಲ್ಪಿಸುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ತಲ್ಲೂರಿನ ಸ್ಥಳೀಯರಾದ ವಿಜಯ ಖಾರ್ವಿ, ಅನಿಲ್ ಖಾರ್ವಿ, ಮಹೇಶ್ ಹಾಜರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು