News Karnataka Kannada
Sunday, April 28 2024
ಉಡುಪಿ

ಕುಂದಾಪುರ: ಅನಾರೋಗ್ಯ ಪೀಡಿತ ಗೋವನ್ನು ಪಾಲನೆ ಮಾಡಿದ ಬಾಲಕರು

Kundapur: Boys take care of a sick cow
Photo Credit : News Kannada

ಕುಂದಾಪುರ: ಗಂಗೊಳ್ಳಿ ಬೇಲಿಕೇರಿಯಲ್ಲಿ ಬಲವಾಗಿ ಹೊಟ್ಟೆಗೆ ಪೆಟ್ಟು ಬಿದ್ದು ಅನಾರೋಗ್ಯ ಪೀಡಿತವಾದ ಅಶಕ್ತ ಬಿಡಾಡಿ ಗೋವನ್ನು ಹಿಡಿದು ಒಂದು ತಿಂಗಳುಗಳ ಕಾಲ ಸೂಕ್ತವಾದ ಚಿಕಿತ್ಸೆಯನ್ನು ನೀಡಿ ಸಂಪೂರ್ಣವಾಗಿ ಗುಣಮುಖ ಮಾಡುವುದರ ಮುಖೇನ ಗೋವನ್ನು ರಕ್ಷಣೆ ಮಾಡಲಾಗಿದೆ.

ಹಿಂದು ಧರ್ಮದಲ್ಲಿ ಗೋಮಾತೆಗೆ ಮಾತೃ ಸ್ಥಾನವನ್ನು ಕಲ್ಪಿಸಲಾಗಿದ್ದು ಗೋ ಪೂಜೆಗೆ ಅಗ್ರಸ್ಥಾನವಿದೆ ನೂತನವಾಗಿ ನಿರ್ಮಿಸಿದ ಮನೆಯ ಪ್ರವೇಶವನ್ನು ಗೋಮಾತೆ ಮಾಡಿದ ಮೇಲೆನೇ ಮನೆಯ ಯಜಮಾನರು ಗ್ರಹ ಪ್ರವೇಶವನ್ನು ಮಾಡುತ್ತಾರೆ.

ಕೃಷಿ ಪ್ರಧಾನವಾದ ಭಾರತದಲ್ಲಿ ಗೋ ಮಾತೆಗೆ ಮತ್ತು ಮಾನವರಿಗೆ ಅವಿನಾಭಾವ ಸಂಬಂಧವಿದೆ.

ಹೊಟ್ಟೆಗೆ ಪೆಟ್ಟು ಬಿದ್ದು ರಂಧ್ರವಾಗಿ ರಕ್ತ ಸೋರಿಕೆಯಿಂದ ಬಳಲಿ ಬೆಂಡಾಗಿರುವ ಗೋವನ್ನು ಕಳೆದ ಒಂದು ತಿಂಗಳುಗಳ ಕಾಲ ಬಾಲಕರು ಪಾಲನೆಯನ್ನು ಮಾಡಿದ್ದಾರೆ.ಅಕ್ಕ ಪಕ್ಕದ ಮನೆಯವರಿಂದ ಹುಲ್ಲು ಗಂಜಿ,ಅನ್ನ, ನೀರು,ಅಂಗಡಿಗಳಿಂದ ತರಕಾರಿಗಳನ್ನು ಸಂಗ್ರಹಿಸಿ ಗೋವಿಗೆ ನೀಡುವುದರ ಮುಖೇನ ಬಾಲಕರ ತಂಡ ಗೋವಿನ ಆರೈಕೆಯಲ್ಲಿ ತೊಡಗಿ ಕೊಂಡಿದ್ದರು.

ಬಾಲಕರ ಪೋಷಣೆಯಲ್ಲಿ ಗೋವು ಸಂಪೂರ್ಣವಾಗಿ ಗುಣಮುಖವಾಗಿದ್ದು ಸ್ವಚ್ಛಂದವಾಗಿ ಪರಿಸರದಲ್ಲಿ ಓಡಾಡಿಕೊಂಡಿದೆ ವಿದ್ಯಾರ್ಥಿಗಳ ಗೋಮಾತೆ ಪ್ರೇಮ ಸಾಮಾಜಿಕ ವಲಯದಲ್ಲಿ ಪ್ರಶಂಸನೆಗೆ ಪಾತ್ರವಾಗಿದೆ.

ಅನಾಥ ಬಿಡಾಡಿ ಗೋವಿಗೆ ಗಂಗೊಳ್ಳಿ ಬೇಲಿಕೇರಿ ನಿವಾಸಿ ದೀಪಕ್ ಖಾರ್ವಿ ಅವರು ತಮ್ಮ ಮನೆಯಲ್ಲಿ ಗೋವನ್ನು ಕಟ್ಟಲು ಸ್ಥಳವನ್ನು ನೀಡಿ ಸಹಕರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು