ಕುಂದಾಪುರ: ಕೋವಿಡ್ ಸಂಕಷ್ಟದಂತ ಸಂದರ್ಭದಲ್ಲಿಯೂ 3000 ಕೋಟಿ.ರೂ ವಿಶೇಷವಾದ ಅನುದಾನವನ್ನು ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ತರಲಾಗಿದ್ದು ಕ್ಷೇತ್ರವನ್ನು ಸಮಗ್ರವಾದ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ 60,000 ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡುವಂತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
57.72 ಲಕ್ಷ.ರೂ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಬೈಂದೂರು ವಿಧಾನಸಭೆ ಕ್ಷೇತ್ರದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಬುಧವಾರ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ನಾಡ ಗ್ರಾ.ಪಂ ಉಪಾಧ್ಯಕ್ಷೆ ಪದ್ದು ಪೂಜಾರ್ತಿ ಮತ್ತು ಸದಸ್ಯ ಶ್ರೀಧರ್ ಬಡಾಕೆರೆ,ಲೋಕೇಶ್ ಅಡಿಗರು,ಮಾಧವ ಅಡಿಗ,ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ,ಅಶೋಕ್ ಶೆಟ್ಟಿ,ಶರತ್ ಶೆಟ್ಟಿ ಉಪ್ಪÅಂದ,ಗುರುರಾಜ್ ಬಡಾಕೆರೆ,ಮಹೇಶ್ ಪೂಜಾರಿ,ವಿಕ್ರಮ್,ಉಮೇಶ್ ಶೆಟ್ಟಿ ಕೋಣ್ಕಿ,ಸುಧೀರ್ ಕೋಣ್ಕಿ,ಪ್ರಥ್ವಿಶ್ ಕೋಣ್ಕಿ ಮತ್ತಿತರರು ಉಪಸ್ಥಿತರಿದ್ದರು.