ಕುಂದಾಪುರ: ಕರಾವಳಿ ತೀರದ ಭಾಗಗಳಲ್ಲಿ ಬಿಸಿಲಿ ತಾಪ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಮೈ ಸುಡುವ ಬಿಸಿಲಿನ ಬೇಗೆಯಿಂದ ಜನರು ಕಂಗಾಲಾಗಿ ಹೋಗಿದ್ದಾರೆ ಹನಿ ನೀರಿಗೂ ಪರಿತಪಿಸುವಂತೆ ಆಗಿದ್ದು ಮಳೆರಾಯನ ಆಗಮನದ ದಾರಿಯನ್ನು ಕಾಯುವಂತೆ ಆಗಿದೆ.
ಮುಂಗಾರಿನ ಆರಂಭದಲ್ಲಿ ಆರ್ಭಟಿಸಿದ್ದ ಮಳೆರಾಯ ಸೆಪ್ಟೆಂಬರ್,ಅಕ್ಟೋಬರ್ ನಂತರ ಕೈ ಕೊಟ್ಟಿದ್ದಾನೆ ಹಿಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ಇದ್ದಿದ್ದರಿಂದ ಜಲಮೂಲ ಬತ್ತಿಹೋಗಿ ಎಪ್ರಿಲ್ ತಿಂಗಳ ಆರಂಭದಲ್ಲೇ ಈ ಬಾರಿ ನೀರು ಕೈ ಕೊಟ್ಟಿದೆ.ಕೆರೆ,ಬಾವಿಗಳ ನೀರು ಅವಧಿಗೆ ಮುನ್ನವೆ ಬರಿದಾಗಿದೆ.
ಕುಂದಾಪುರ ಮತ್ತು ಬೈಂದೂರು ಭಾಗದ ಪ್ರದೇಶಗಳಲ್ಲಿ ನೀರಿಗೆ ಬರ ಉಂಟಾಗಿದೆ ಬಿಸಿಲಿನ ಹೊಡೆತಕ್ಕೆ ರೈತರ ಪ್ರಮುಖ ಬೆಳೆಗಳಾದ ಅಡಿಕೆ ಮತ್ತು ತೆಂಗಿನ ಮರದ ಗರಿಗಳು ಸುಟ್ಟುಹೋಗಿ ಧರೆಗೆ ತಲೆ ಬಾಗಿ ನಿಂತ್ತಿವೆ.