ಉಡುಪಿ: ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆ ಕೊಡಂಕೂರು ವಾರ್ಡ್ ನ ಕಾಂಗ್ರೆಸ್ ಮುಖಂಡರಾದ ದಿನೇಶ್ ಮೂಡುಬೆಟ್ಟು ಅವರ ನೇತೃತ್ವದಲ್ಲಿ ಸಂದೀಪ್ ಕೂಡಂಕೂರು ಅವರ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಅಮೃತ ಶೆಣೈ, ಮಹಾಬಲ ಕುಂದರ್, ಕುಶಲ್ ಶೆಟ್ಟಿ, ಗಣಪತಿ ಶೆಟ್ಟಿಗಾರ್, ಗಣೇಶ್ ನೆರ್ಗಿ, ರವಿ ಶೆಟ್ಟಿ, ಅಶೋಕ ಪೂಜಾರಿ, ವಾಸುದೇವ, ಸಂದೀಪ್, ದಿನೇಶ್ ಹಾಗೂ ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.