ಕಾರ್ಕಳ: ಈ ದುಲ್ ಫಿತರ್ ನ ವಿಶೇಷತೆ ಏನೆಂದರೆ ಪಿತ್ರ ಜಕಾತ್ ಕಡ್ಡಾಯವಾಗಿ ನೀಡುವುದು ದಾನವನ್ನು ಯಾರಿಗೂ ಬೇಕಾದರೂ ನೀಡಬಹುದು ಈ ದಿನ ಹಗಲು ಮತ್ತು ರಾತ್ರಿ ಖರ್ಚಿಗೆ ಬೇಕಾದಕ್ಕಿಂತ ಹೆಚ್ಚಿನ ಸೊತ್ತು ಉಳ್ಳ ಎಲ್ಲರಿಗೂ ಫಿತರ್ ಜಕಾತ್ ಕಡ್ಡಾಯವಾಗಿದೆ ಎಂದು ಕಾರ್ಕಳ ಜಾಮ್ಯ ಮಸೀದಿಯ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಸ್ಮಿ ಈದ್ಗಾದಲ್ಲಿ ಪ್ರವಚನ ನೀಡಿದರು.
ಬೆಳಗಿನಿಂದಲೇ ಈ ದುಲ್ ಫಿತರ್ ನ ನಮಾಜ್ ನೆರವೇರಿಸಲು ದೂರ ದೂರದಿಂದ ಭಕ್ತಾದಿಗಳು ಈದ್ಗಾ ದಲ್ಲಿ ಜಮಾಯಿಸಿ ನಮಾಜ್ ನೆರವೇರಿಸಿದರು. ಜಮಾತಿನ ಅಧ್ಯಕ್ಷರಾದ ಅಸ್ಫಾಖ್ ಅಹ್ಮದ್ ಮಾತನಾಡಿದ ಅವರು ನಾವೆಲ್ಲರೂ 30 ದಿನಗಳ ಕಠಿಣ ಉಪವಾಸವನ್ನು ಆಚರಿಸಿ ಇಂದು ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಗೋಸ್ಕರ ಒಟ್ಟು ಕೂಡಿದ್ದೇವೆ. ನಮ್ಮ ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿ ಯಿಂದ ಬಾಳಬೇಕೆಂದು ದೇಶದ ಭದ್ರತೆಗೆ ಹಾಗೂ ಖಂಡತೆಗೆ ಯಾವುದೇ ರೀತಿಯ ಧಕ್ಕೆ ಬರದ ಹಾಗೆ ನೋಡಿಕೊಳ್ಳುವುದೇ ಈ ಹಬ್ಬದ ಸಂದೇಶ ಎಂದು ಹೇಳಿದರು. ತಮ್ಮಿಂದ ಅಗಲಿದವರ ಕಬರ್ ಬಳಿ ತೆರಳಿಅವರ ಪರಲೋಕ ಜೀವನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.