ಕಾರ್ಕಳ: ಕರ್ನಾಟಕ ವಿಧಾನಸಭೆ ನೀತಿ ಸಹಿಂತೆ ಜೊತೆಗೆ ಮೇ 13 ರಂದು ಚುನಾವಣೆ ಮುಕ್ತಾಯಗೊಂಡಿದ್ದರೂ ಅದರ ಛಾಯೆ ಇನ್ನೂ ಕಾಣಸಿಗುತ್ತಿದೆ ಎಂದು ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಹೇಳಿದ್ದಾರೆ.
ಸರಕಾರದಿಂದ ನಡೆದಿರುವ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಂದು ಅಳವಡಿಸಿದ ನಾಮಫಲಕಗಳಿಗೆ ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಹೊದಿಕೆ ಹಾಕಲಾಗಿತ್ತು. ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ರಾಜ್ಯದಲ್ಲಿ ಸರಕಾರ ಬದಲಾಗಿದ್ದು ಚುನಾವಣಾ ನೀತಿ ಸಂಹಿತೆ ಇನ್ನೂ “ಜಾರಿ” ಯಲ್ಲಿ ಇರುವಂತೆ ಕಂಡು ಬರುತ್ತದೆ.
ಚುನಾವಣಾ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯವಾಗುತ್ತಿದ್ದಂತೆ ತಮ್ಮ ಸಿಬ್ಬಂದಿಗಳಿಗೆ ಸ್ವಷ್ಟ ಅದೇಶ ನೀಡದೇ ಇರುವುದರಿಂದ ಕಾರ್ಕಳ ವ್ಯಾಪ್ತಿಯಲ್ಲಿ ಉದ್ಘಾಟನಾ ನಾಮಫಲಕಗಳು ಹೊದಿಕೆಯಿಂದ ಮುಚ್ಚಿಕೊಂಡಿವೆ. ಸಂಬಂಧ ಪಟ್ಟ ಇಲಾಖೆಗಳು ನಾಮಫಲಕಗಳಿಗ ಮುಚ್ಚಿರುವ ಹೊದಿಕೆಗಳನ್ನು ತೆರವುಗೊಳಿಸಬೇಕಾಗಿ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಆಗ್ರಹಿಸಿದ್ದಾರೆ.