ಕಾರ್ಕಳ: ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಜಂಟಿ ಸಹಕಾರದಲ್ಲಿ ೧೯ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳಕೂಟಕ್ಕೆ ಸಚಿವ ವಿ. ಸುನೀಲ್ ಕುಮಾರ ಚಾಲನೆ ನೀಡಿದರು.
ಶ್ರೀ ಮಹಾಲಿಂಗೇಶ್ವರ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯ್ಯಾರು ಚರ್ಚ್ನ ಧರ್ಮಗುರು ವಂದನೀಯ ರೆ.ಫಾ. ಪಾವುಲ್ ರೇಗೋ, ಮಿಯ್ಯಾರು ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ರಾಜಿಕ್ ಅಹಮ್ಮದ್, ಮಿಯ್ಯಾರು ಗ್ರಾಮ ಪಂಚಾಯತ್ನ ಅಧ್ಯಕ್ಷ ಗಿರೀಶ್ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ, ಉಪಾಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಗುಣಪಾಲ ಕಡಂಬ, ಕೋಶಾಧಿಖಾರಿ ಶ್ಯಾಮ್ ಶೆಟ್ಟಿ, ಸಹಕೋಶಾಧಿಕಾರಿ ರವೀಂದ್ರ ಕುಮಾರ್, ಕಾರ್ಯದರ್ಶಿ ದಯಾನಂದ ಬಂಗೇರಾ, ಸಹ ಕಾರ್ಯದರ್ಶಿ ಪ್ರಕಾಶ ಬಲಿಪ, ಮಿಯ್ಯಾರು ಕಂಬಳ ಸಮಿತಿಯ ಪ್ರಮುಖರಾದ ಇರ್ವತ್ತೂರು ಉದಯ ಎಸ್.ಕೋಟ್ಯಾನ್, ಶುಭದರಾವ್, ಸುನೀಲ್ ಬಜಗೋಳಿ, ಅಂತೋನಿ ಡಿಸೋಜಾ ನಕ್ರೆ, ಜೆರಾಲ್ಡ್ ಡಿಸಿಲ್ವ, ವಿಜಯಕುಮಾರ್ ಕಂಗಿನಮನೆ, ರತ್ನಾಕರ ಮಡಿವಾಳ, ಶಾಂತಿ ರಾಜ್ ಜೈನ್ ಶಿರ್ಲಾಲು, ಕೆ.ಮಹಾವೀರ ಹೆಗ್ಡೆ ಇತರರು ಉಪಸ್ಥಿತರಿದ್ದರು.