News Karnataka Kannada
Monday, April 29 2024
ಉಡುಪಿ

ಕಾರ್ಕಳ: ಸಿದ್ದರಾಮಯ್ಯ ನೆಲೆಯಿಲ್ಲದ ನಾಯಕ- ಸಚಿವ ಸುನಿಲ್ ಕುಮಾರ್

Karkala: Siddaramaiah is a leader without a base, says Minister Sunil Kumar
Photo Credit : News Kannada

ಕಾರ್ಕಳ: ಹಿಂದುತ್ವ,ರಾಷ್ಟ್ರೀಯತೆ ಕುರಿತಾಗಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಿದ್ದರಾಮಯ್ಯನವರಿಗೆ ಸಿದ್ದಾಂತವೇ ಇಲ್ಲ. ಸೋಲಿನಿಂದ ಕಂಗೆಟ್ಟಿರುವ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಟದಲ್ಲಿ ಪದರಾಡುತ್ತಿರುವ ದುರಂತ ನಾಯಕರಾಗಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

ಅವರು ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಕಾಂಗ್ರೆಸ್ ಕೂಡ ಹಿಂದುಗಳ ಪರವಾಗಿರುವ ಪಕ್ಷ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ರಾಷ್ಟ್ರೀಯತೆ ಹಾಗೂ ಹಿಂದುತ್ವದ ಪ್ರಯೋಗ ಶಾಲೆ. ದೇಶ ಮೊದಲು ಎನ್ನುವುದು ಇಲ್ಲಿನ ಜನರ ರಕ್ತದಲ್ಲೇ ಇದೆ. ಸಿದ್ದರಾಮಯ್ಯನವರು ಕರಾವಳಿ ಜನರಿಗೆ ರಾಷ್ಟ್ರೀಯತೆ ಹಿಂದುತ್ವದ ಪಾಠ ಮಾಡಬೇಕಿಲ್ಲ,ಅವರೊಬ್ಬ ನೆಲೆಯಿಲ್ಲದ ನಾಯಕ ಎಂದು ಸುನಿಲ್ ವ್ಯಂಗ್ಯವಾಡಿದರು.

ಕಾರ್ಕಳ ಉತ್ಸವ, ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಚುನಾವಣೆ ದೃಷ್ಟಿಯಿಂದ ನಡೆಸುತ್ತಿದ್ದೀರಿ ಎನ್ನುವ ಆರೋಪಗಳಿವೆ, ಪರಶುರಾಮನ ಹೆಸರಿನಲ್ಲಿ ಆಸ್ಪತ್ರೆ, ಶಾಲೆಗಳನ್ನು ಸ್ಥಾಪಿಸಬಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ದೃಷ್ಟಿಯಿಂದ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ, ಕಾರ್ಕಳವನ್ನು ಸ್ವರ್ಣ ಕಾರ್ಕಳವನ್ನಾಗಿಸಿ ರೂಪಿಸಬೇಕೆಂಬ ಪ್ರಯತ್ನಕ್ಕೆ ಜನರ ಬೆಂಬಲ ಸದಾ ಇರುತ್ತದೆ. ಪರಶುರಾಮ ಥೀಮ್ ಪಾರ್ಕ್ ನನಗೆ ಪ್ರೇರಣೆ, ಪರಶುರಾಮ ಆಸ್ಪತ್ರೆ, ಶಾಲೆಗಳು ನಿರ್ಮಾಣ ಪ್ರಸ್ತಾಪ ಸ್ವಾಗತಾರ್ಹ ,ಅವರವರ ಕಲ್ಪನೆ ತಕ್ಕಂತೆ ಯೋಜನೆ ಹಾಕಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ, ಮುಂದಿನ ಚುನಾವಣೆಯಲ್ಲಿ ಜನ ಅಭಿವೃದ್ಧಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು