News Karnataka Kannada
Sunday, April 28 2024
ಉಡುಪಿ

ಕಾರ್ಕಳದಲ್ಲಿ 17 ಅಡಿ ಕಾಳಿಂಗ ಸರ್ಪ ಸೆರೆ

Karkala: 17-foot king cobra captured
Photo Credit : Pixabay

ಕಾರ್ಕಳ: ದುರ್ಗ ಗ್ರಾಮದಲ್ಲಿ ಪರಿಸರದಲ್ಲಿ ಹರಿದಾಡುತ್ತಾ ನಾಗರಿಕ ನಿದ್ದೆಗೆಡಿಸಿದ, 17 ಅಡಿ ಉದ್ದದ ಕಾಳಿಂಗವೊಂದನ್ನು ಮಂಗಳವಾರ ತಡರಾತ್ರಿ ಉರಗಪ್ರೇಮಿ ಅನಿಲ್ ಪ್ರಭು ಸೆರೆಹಿಡಿದ್ದಾರೆ. ಕಳೆದ ಕೆಲ ದಿನಗಳಿಂದ ಇದೇ ಪರಿಸರದಲ್ಲಿ ಕಾಣಸಿಕ್ಕಿರುವ ಕಾಳಿಂಗವನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖಾಧಿಕಾರಿಗೆ ಗ್ರಾಮಸ್ಥರು ದುಂಬಾಲು ಬಿದ್ದಿದ್ದರು.

ಗ್ರಾಮಸ್ಥರ‌ ಕೋರಿಕೆ ಮನ್ನಣೆ ಸಿಗದೆ‌ ಇದ್ದಾಗ ಮಂಗಳವಾರ ರಾತ್ರಿ ಸುಮಾರು 10ಗಂಟೆಯ ವೇಳೆಗೆ ಮತ್ತೇಬಕಾಳಿಂಗ ಕಾಣಸಿಕ್ಕಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಭಯ ಹೆಚ್ಚುಮಾಡಲು ಕಾರಣವಾಗಿತ್ತು.

ಉರಗ ಸೆರೆ ಹಿಡಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದರಿಂದಾಗಿ ಇಲ್ಲಿಯೂ ಉರಗ ಪ್ರೇಮಿ ಅನಿಲ್ ಪ್ರಭು ಅವರು ಗ್ರಾಮಸ್ಥರ‌ ಕೋರಿಕೆ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಕಾಳಿಂಗ ಸರ್ಪವನ್ನು ತಡ ರಾತ್ರಿ 11ಗಂಟೆಯ ಹೊತ್ತಿಗೆ ಸೆರೆ ಹಿಡಿದರು. ಖುದ್ದಾಗಿ ಸ್ವತ: ವಾಹನದಲ್ಲಿ ಕುದುರೆಮುಖಕ್ಕೆ ತೆರಳಿ ಅಭಯಾರಣ್ಯದಲ್ಲಿ ಸೆರೆ ಹಿಡಿದ ಕಾಳಿಂಗವನ್ನು ಬಂಧ ಮುಕ್ತ ಗೊಳಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ವ್ಯವಸ್ಥೆ ಇಲ್ಲ:ತಾಲೂಕು ಮಟ್ಟದಲ್ಲಿ ಅಪಾಯವಾಗಿ ಉರಗಗಳು, ಪ್ರಾಣಿಗಳು ಉಪಟಳ ಅಗ್ಗಿಂದಾಗೆ ವರದಿಯಾಗುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕಾರ್ಕಳ ವಲಯದಲ್ಲಿ ಅವುಗಳ ಸೆರೆ ಹಿಡಿಯಲು ಕರಗತ ಹೊಂದಿದವರು ಇಲ್ಲದೇ ಇರುವುದರಿಂದ ಕುದುರೆಮುಖ, ಶಿವಮೊಗ್ಗ ಅರಣ್ಯ ಇಲಾಖಾ ಹಾಗೂ ಮಂಗಳೂರು ಪಿಲಿಕುಳದಿಂದ ನುರಿತರನ್ನು ಘಟನಾ ಸ್ಥಳಕ್ಕೆ ಕರೆಯಿಸಬೇಕಾದ ಪರಿಸ್ಥಿತಿ ಇಲಾಖೆಯದು.

ಜೀವಕ್ಕೆ ಕುತ್ತಾದರೆ ಹೊಣೆ ಯಾರು: ಅಪಾಯಕಾರಿ ಉರಗಗಳನ್ನು ಸೆರೆ ಹಿಡಿಯುವುದಕ್ಕೆ ಅರಣ್ಯ‌ಇಲಾಖೆಯು ಉರಗ ಪ್ರೇಮಿ ಅನಿಲ್ ಪ್ರಭು ಅವರನ್ನು ಆಶ್ರಯಿಸುತ್ತದೆ. ಕಾನೂನು ಚೌಕಟ್ಟಿನಲ್ಲಿ ಅರಣ್ಯ ಇಲಾಖೆ ಯಾವುದೇ ರೀತಿಯಲ್ಲಿ ಅನಮತಿ ನೀಡದೇ, ಕೆಲವೊಂದು ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಯಾರು ಹೊಣೆ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಉತ್ತರಿಸಲಿದೆಯೇ?

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು