ಉಡುಪಿ: ಗೌರಿ- ಗಣೇಶನ ಹಬ್ಬದ ಹಿನ್ನೆಲೆಯಲ್ಲಿ 15 ವಿದ್ಯಾರ್ಥಿಗಳು ಸೇರಿ ರಚಿಸಿದ ಗಣೇಶನ ಮರಳು ಶಿಲ್ಪ ಎಲ್ಲರ ಗಮನ ಸೆಳೆಯುತ್ತಿದೆ. ಕೋಡಿ ಕಡಲ ಕಿನಾರೆಯಲ್ಲಿ ಈ ಮರಳು ಕಲಾಕೃತಿ ಮೂಡಿ ಬಂದಿದೆ.
4 ಅಡಿ ಎತ್ತರ ಮತ್ತು 9 ಅಡಿ ಅಗಲದ ಬಣ್ಣದ ಕಲಾಕೃತಿ ಇದಾಗಿದೆ. ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಶಿಕ್ಷಕಿ ಚೇತನಾ ಜಿ. ಸಂತೋಷ್ ಹಾಲಾಡಿ ಸಹಕಾರದೊಂದಿಗೆ ವರ್ಣ ವಿನಾಯಕ ಎಂಬ ಶೀರ್ಷಿಕೆಯಡಿಯಲ್ಲಿ ತ್ರಿವರ್ಣ ಕಲಾ ಕೇಂದ್ರದ ಕಿರಿಯರ ವಿಭಾಗದ ಆಯ್ದ ವಿದ್ಯಾರ್ಥಿಗಳು ರಚಿಸಿದ್ದಾರೆ.