ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಚುನಾವಣೆ ಸಂದರ್ಭದಲ್ಲಿ ಮಾಡುತ್ತಿರುವುದು ಅಂತರಾಷ್ಟ್ರೀಯ ಪಿತೂರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಚುನಾವಣೆ ಹತ್ತಿರ ಇರುವಾಗ ರೈತರು ಡೆಲ್ಲಿಗೆ ಬಂದಿದ್ದಾರೆ. ಮೂರು ಸುತ್ತಿನ ಚರ್ಚೆಯಾಗಿದೆ. ರೈತರ ಜೊತೆ ಮತ್ತೆ ಚರ್ಚೆಗೆ ಈಗಲೂ ಸಿದ್ದವಿದ್ದೇವೆ ಎಂದರು.
2006ರಲ್ಲಿ ಸ್ವಾಮಿನಾಥನ್ ವರದಿ ತಯಾರಾಗಿತ್ತು, ಆಗ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಶೀತಲೀಕರಣ ಘಟಕ ಮಾಡುವ ಬದಲು ಶಿಫಾರಸ್ಸುಗಳನ್ನು ಶೀತಲೀಕರಣ ಘಟಕದಲ್ಲಿ ಇರಿಸಲಾಗಿತ್ತು ಎಂದು ದೂರಿದರು.
ಸ್ವಾಮಿನಾಥನ್ ಕಮಿಟಿ 207 ಶಿಫಾರಸುಗಳನ್ನು ಮಾಡಲಾಗಿತ್ತು. ಮೋದಿ ಸರ್ಕಾರ ಎಲ್ಲಾ ಶಿಫಾರಸುಗಳನ್ನು ಈಡೇರಿಸಿದೆ. ಮೋದಿ ಪ್ರಧಾನಿಯಾದ ಕೂಡಲೇ ಸ್ವಾಮಿನಾಥನ್ ಭೇಟಿಯಾಗಿ ಭಾವನೆ ಅರ್ಥ ಮಾಡಿಕೊಂಡು ಎಲ್ಲವನ್ನೂ ಈಡೇರಿಸಿದ್ದಾರೆ. 22 ಬೆಳೆಗಳಿಗೆ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ಕೊಟ್ಟು ಎಂಎಸ್ ಪಿ ಘೋಷಣೆ ಮಾಡಲಾಗಿದೆ ಎಂದರು.